ವಿಶ್ವಕನ್ನಡ ಸಮ್ಮೇಳನಗಳಿಂದ ಕನ್ನಡ, ಕರ್ನಾಟಕಕ್ಕೆ ನಿಶ್ಚಿತವಾಗಿಯೂ ಲಾಭವಿದೆ. ಬೆಳಗಾವಿ ಮತ್ತು ಇತರ ಗಡಿ ಭಾಗಗಳಲ್ಲಿ ಸಮ್ಮೇಳನಕ್ಕೆ ಮುಂಚೆಯೇ ‘ಕನ್ನಡದ ಕಂಪು’ ಶೇ 40-50 ರಷ್ಟು ಹೆಚ್ಚಳವಾಗಿರುವುದನ್ನು ಎಲ್ಲರೂ ಕಾಣಲಿಕ್ಕೆ ಹತ್ತಿದ್ದಾರೆ. ವಿಶ್ವ ಕನ್ನಡ ಸಮ್ಮೇಳನಗಳನ್ನು ನಿರ್ದಿಷ್ಟ ಅವಧಿಯಲ್ಲಿ, ಚುನಾವಣೆಗಳಂತೆ, ಯಾವುದೇ ಸರ್ಕಾರ ಅಥವಾ ರಾಜ್ಯಪಾಲ ಆಡಳಿತವಿದ್ದರೂ ನಡೆಸಬೇಕು.
ಮೊದಲು ಕರ್ನಾಟಕದಲ್ಲಿ ಗಡಿಭಾಗಗಳಲ್ಲಿ ಅಂದರೆ ಬೀದರ್, ಕಾಸರಗೋಡು, ಸೊಲ್ಲಾಪುರಗಳಲ್ಲಿ ಮಾಡಬೇಕು. ಈ ವಿಶ್ವ ಸಮ್ಮೇಳನದ ವಾದ - ವಿವಾದಗಳು ಎರಡು ತಿಂಗಳು ಮುಂಚೆಯೇ ಮುಗಿಯಬೇಕು, ಅವಶ್ಯವಿದ್ದರೆ ಒಂದು ತಿಂಗಳ ನಂತರ ಸಮ್ಮೇಳನಗಳ ವಿಮರ್ಶೆಯಾಗಲಿ. ಹಾಗೆ ನೋಡಿದರೆ ಕನ್ನಡ ಸಾಹಿತ್ಯ ಸಮ್ಮೇಳನ ಎರಡು ವರ್ಷಕ್ಕೊಮ್ಮೆ ನಡೆದರೂ ಸಾಕು. ವಿಶ್ವ ಕನ್ನಡ ಸಮ್ಮೇಳನವು ತಪ್ಪದೇ ನಡೆಯಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.