ADVERTISEMENT

ಕರ್ನಾಟಕ ಸಂಗಾತಿ ಪರಿಷ್ಕಾರಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2012, 19:30 IST
Last Updated 25 ಜೂನ್ 2012, 19:30 IST

ಕನ್ನಡ ಪುಸ್ತಕ ಪ್ರಾಧಿಕಾರವು 2002ರಲ್ಲಿ  ಪ್ರೊ ಚಿ. ಶ್ರಿನಿವಾಸರಾಜು ಮತ್ತು ಬಸವರಾಜ ಕಲ್ಗುಡಿ ಅವರು ಸಂಪಾದಿಸಿದ  `ಕರ್ನಾಟಕ ಸಂಗಾತಿ~ ಸಾಮಾನ್ಯ ಜ್ಞಾನ ಕೈಪಿಡಿಯನ್ನು ಪ್ರಕಟಿಸಿತ್ತು. 2005ರಲ್ಲಿ ಅದೇ ಕೃತಿಯ ಮರುಮುದ್ರಣವೂ ಆಗಿತ್ತು. ಇದೀಗ ಮತ್ತೊಮ್ಮೆ ಮರುಮುದ್ರಣಕ್ಕಾಗಿ ಟೆಂಡರ್ ಕರೆದಿದೆ.

2011ರ ಜನಗಣತಿ ಆಧರಿಸಿದ, ತೀರಾ ಇತ್ತೀಚಿನ ಘಟನಾವಳಿಗಳು, ಯೋಜನೆಗಳು ಮತ್ತು ಅಭಿವೃದ್ಧಿಯ ಮಾಹಿತಿಯನ್ನು ಒಳಗೊಂಡಂತೆ ಹೊಸದಾಗಿ ಈ  ಕರ್ನಾಟಕ ಸಂಗಾತಿ  ಪರಿಷ್ಕಾರಗೊಳ್ಳಬೇಕಿದೆ.  ಹಾಗೆ ಮಾಡದೆ ಸುಮ್ಮನೇ ಹಳೆಯ ಸರಕನ್ನೇ ಮರುಮುದ್ರಿಸುವುದರಿಂದ ಯಾವುದೇ ಲಾಭ ಆಗಲಾರದು.  ಮರುಮುದ್ರಣಗಳು ಅಪ್‌ಡೇಟ್ ಆಗದೇ ಇದ್ದರೆ ಮೂಲೆ ಸೇರುವುದು ಖಚಿತ.

ಈ ಹಳಸಲು ಸರಕಿಗೆ ಬದಲಾಗಿ ಈಗಾಗಲೇ ಕರ್ನಾಟಕ ಗ್ಯಾಸೆಟಿಯರ್ ಇಲಾಖೆ ಪ್ರಕಟಿಸಿರುವ ಕರ್ನಾಟಕ ಕೈಪಿಡಿ 2012 ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು ಡಿವಿಡಿ ಸಹಿತ ಅತ್ಯುತ್ತಮ ಮಾಹಿತಿಯ ಆಗರವಾಗಿದೆ.  ಅದಕ್ಕೇ ಇನ್ನಷ್ಟು ರಿಯಾಯಿತಿ ದೊರೆಯುವಂತೆ ಮಾಡಿದಲ್ಲಿ ಬಹುತೇಕ ಎಲ್ಲಾ ಸ್ಪರ್ಧಾರ್ಥಿಗಳಿಗೆ ಅನುಕೂಲವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.