ADVERTISEMENT

ಕಲಬುರ್ಗಿಯವರದು ಸೀಮಿತ ಗ್ರಹಿಕೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 19:30 IST
Last Updated 21 ಜೂನ್ 2011, 19:30 IST

ಡಾ. ಎಂ.ಎಂ. ಕಲಬುರ್ಗಿಯವರು ತಮ್ಮಂದು ಭಾಷಣದಲ್ಲಿ (ಪ್ರ.ವಾ., ಮುಖ ಪುಟ, ಜೂ. 19) ಹೀಗೆ ಹೇಳಿದರೆಂದು ವರದಿಯಾಗಿದೆ: ಮಹಾತ್ಮ ಗಾಂಧಿ ಆರಂಭಿಸಿದ ಚಳವಳಿ ಕೇವಲ ಬ್ರಿಟಿಷರನ್ನು ದೇಶದಿಂದ ತೊಲಗಿಸುವುದು ಆಗಿತ್ತು.

ಹೀಗಾಗಿ ಉದ್ದೇಶ ಈಡೇರಿದನಂತರ ಆ ಚಳವಳಿ ಅಂತ್ಯ ಕಂಡಿತು~. ಇದು ಸೀಮಿತ ಗ್ರಹಿಕೆ ಮಾತ್ರ. ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ತಂದುಕೊಡುವುದಷ್ಟೆ ಗಾಂಧಿಜಿಯ ಗುರಿಯಾಗಿರಲಿಲ್ಲ.

ಅವರ ಅಹಿಂಸಾ ಚಳವಳಿಯ ಉದ್ದೇಶ ಬಹಳ ವ್ಯಾಪಕ. ಅದು ಇಂದಿಗೂ ಪ್ರಸ್ತುತವಾಗಿದ್ದು ಜಾಗತಿಕ ಪ್ರಭಾವ ಬೀರುತ್ತಿರುವುದನ್ನು ಕಾಣುತ್ತಿದ್ದೇವೆ. ಗಾಂಧಿ ಮಾರ್ಗ ಕ್ರಮಣದ ಪರಿಣಾಮಗಳು ಬಹುಶಃ ಮುಂದುವರಿಯುತ್ತವೆ; ಮುಂದುವರಿಯಬೇಕು, ಭಾರತದ ಮತ್ತು ಪ್ರಪಂಚದ ಶ್ರೇಯದ ದೃಷ್ಟಿಯಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.