ಬಾಪೂಜಿನಗರ 2ನೇ ಹಂತದಲ್ಲಿ ರಾತ್ರಿವೇಳೆ ವಾಹನಗಳು, ಅದರಲ್ಲೂ ಸೈಕಲ್ಗಳ ಕಳ್ಳತನ ಹೆಚ್ಚಾಗಿದೆ. ಇತ್ತೀಚೆಗೆ ಇದೇ ಬಡಾವಣೆಯಲ್ಲಿ ಬಾಗಿಲನ್ನು ಕೊರೆದು ಕಳ್ಳತನಕ್ಕೆ ಪ್ರಯತ್ನಿಸಿದ್ದೂ ಕಂಡು ಬಂದಿದೆ. ಹೀಗೆ ದಿನೇ ದಿನೇ ನಡೆಯುತ್ತಿರುವ ಹತ್ತಾರು ಘಟನೆಗಳಿಂದ ನಾಗರಿಕರು ತಲ್ಲಣಗೊಳ್ಳುವಂತಾಗಿದೆ. ಪೊಲೀಸರು ಈ ಕಡೆಗಳಲ್ಲಿ ಗಸ್ತು ತಿರುಗದಿರುವುದೇ ಇದಕ್ಕೆ ಕಾರಣ ಎನ್ನಬಹುದು. ಆದ್ದರಿಂದ ಪೊಲೀಸ್ ಇಲಾಖೆ ಇತ್ತ ಕಡೆ ಗಮನ ಹರಿಸಬೇಕೆಂದು ಮನವಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.