ಕೃತಿಚೌರ್ಯಕ್ಕೆ ಸಂಬಂಧಿಸಿದ ಆರು ಪ್ರಕರಣಗಳ ಬಗ್ಗೆ ತನಿಖೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ನಿರ್ಧರಿಸಿರುವುದು (ಪ್ರ.ವಾ., ಜೂನ್ 26) ಸ್ವಾಗತಾರ್ಹ.
ಅಂದಹಾಗೆ ತನಿಖೆ ಸೂಕ್ಷ್ಮತೆಯನ್ನು ಪಡೆದುಕೊಂಡರೆ ಕೃತಿಚೌರ್ಯದ ಇನ್ನಷ್ಟು ಪ್ರಕರಣಗಳು ಹೊರಬರಲಿವೆ; ಅದು ಆಗಬೇಕು ಕೂಡ. ಏಕೆಂದರೆ ಕೃತಿಚೌರ್ಯ ಅಂದರೆ ಏನು, ಅದು ಏಕೆ ನಿಷಿದ್ಧ ಎಂಬ ಶಿಕ್ಷಣವನ್ನು ನೀಡಬೇಕಿರುವ ವಿ.ವಿಗಳೇ ಕೃತಿಚೌರ್ಯದ ತವರು ಮನೆಯಾದರೆ ಹೇಗೆ? ಎಲ್ಲೆಡೆ ಭ್ರಷ್ಟಾಚಾರ ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ಸರಸ್ವತಿ ಮಂದಿರವಾದರೂ ಪವಿತ್ರವಾಗಿ ಇರಬೇಡವೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.