ADVERTISEMENT

ಕೃಷಿಗೆ ಪ್ರತ್ಯೇಕ ಟಿ.ವಿ ಚಾನೆಲ್ ಬೇಕು

ಮಂಜುನಾಥ ಹೊಳಲು
Published 25 ಫೆಬ್ರುವರಿ 2014, 19:30 IST
Last Updated 25 ಫೆಬ್ರುವರಿ 2014, 19:30 IST

ಮಾಹಿತಿ ಯುಗದಲ್ಲಿ ಮಾನವನಿಗೆ ದಿನ-ನಿತ್ಯ ಮಾಹಿತಿಯ ಕಣಜ ಬೇಕಾಗುತ್ತೆ. ಮನೋ­ರಂಜನೆಗಾಗಿ ದೇಶದಲ್ಲಿ  ನೂರಕ್ಕಿಂತಲೂ ಹೆಚ್ಚು ಟಿ.ವಿ ಚಾನೆಲ್‌ಗಳಿವೆ.

ನಮ್ಮ ರಾಜ್ಯದಲ್ಲಿ ಏಳೆಂಟು ಚಾನೆಲ್‌ಗಳಿವೆ. ದೇಶದಲ್ಲಿ ಭಾರಿ ಸಂಖ್ಯೆಯಲ್ಲಿ ರೈತರಿದ್ದಾರೆ, ಆದರೆ ಕೃಷಿಗೆ ಪ್ರತ್ಯೇಕ ಟಿ.ವಿ ಚಾನೆಲ್ ಇಲ್ಲದಿರುವುದು ವಿಚಿತ್ರ.

ರಾಜ್ಯದಲ್ಲಿ ಕೃಷಿಗೆ ಒತ್ತುಕೊಟ್ಟು ವಲಯ­ವಾರು ಕೃಷಿ ವಿಶ್ವವಿದ್ಯಾಲಯ ಪ್ರಾರಂಭಿಸಿರು­ವುದು ಉತ್ತಮ ಬೆಳವಣಿಗೆ. ಹಾಗೆಯೇ ಸಹಸ್ರಾರು ಜನರಿಗೆ ಕೆಲಸ ಕೊಟ್ಟಿರುವ ಕೃಷಿಗೆ ಪ್ರತ್ಯೇಕ ಟಿ.ವಿ ಚಾನೆಲ್ ಅತ್ಯವಶ್ಯಕವಾಗಿದೆ. ನೆರೆಯ ಕೇರಳದಲ್ಲಿ ಈಗಾಗಲೇ ಈ ಪ್ರಯತ್ನ ನಡೆದಿದೆ.

ಹವಾಮಾನ ವೈಪರೀತ್ಯ, ಬೆಳೆಯಲ್ಲಿನ ಏರುಪೇರು ಹಾಗೂ ಅತಿಯಾದ ಮಣ್ಣಿನ ಸವಕಳಿಯಿಂದಾಗಿ ಕೃಷಿ ಬದಲಾಗುತ್ತಿದೆ.  ಕೆಲ ಟಿ.ವಿ ಚಾನೆಲ್‌ಗಳು ಅಪರೂಪಕ್ಕೆ ಕೆಲ ಕೃಷಿ ಸಂಬಂಧಿಸಿದ ಕಾರ್ಯಕ್ರಮಗಳನ್ನು ಬಿತ್ತರಿಸು­ತ್ತಿರುವುದು ಆಶಾದಾಯಕ. ಅಷ್ಟಕ್ಕೆ ಸೀಮಿತ­ಗೊಳಿಸಿದರೆ ಸಾಲದು.

ಈಗಲಾದರೂ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಕೃಷಿಗಾಗಿ ಪ್ರತೇಕ ಟಿ.ವಿ ಚಾನೆಲ್ ಪ್ರಾರಂಭಿಸಿದರೆ  ರೈತ ವರ್ಗಕ್ಕೆ ತುಂಬಾ ಉಪಯೋಗವಾದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.