ಸಚಿವ ಅನಂತಕುಮಾರ್ ಹೆಗಡೆ ಅವರ ನಾಲಿಗೆ ಕತ್ತರಿಸಿ ಕೊಟ್ಟವರಿಗೆ ₹ 1 ಕೋಟಿ ಬಹುಮಾನ ನೀಡುವುದಾಗಿ ಕಲಬುರ್ಗಿಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುರುಶಾಂತ ಪಟ್ಟೇದಾರ ಘೋಷಿಸಿದ್ದಾರೆ (ಪ್ರ.ವಾ., ಡಿ. 27)!
ಆ ನಾಲಿಗೆಯನ್ನು ಈ ಮಹಾನುಭಾವರು ಏನು ಮಾಡುತ್ತಾರೆ? ಆ ನಾಲಿಗೆಗೆ ಅಷ್ಟೊಂದು ಬೆಲೆ ಕಟ್ಟಲು ಕಾರಣವೇನು?
ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯರ ಬಳಿ, ಕೋಟ್ಯಂತರ ರೂಪಾಯಿ ಬಹುಮಾನ ಕೊಡುವಷ್ಟು ಹಣ ಇದೆಯೆಂದಾದರೆ, ಇವರೇನಾದರೂ ಶಾಸಕ ಅಥವಾ ಮಂತ್ರಿಯಾಗಿದ್ದರೆ ಬಹುಮಾನದ ಮೊತ್ತ ಎಷ್ಟಿರುತ್ತಿತ್ತು? ಸಚಿವರ ನಾಲಿಗೆಗೆ ಕೊಡುವ ಬದಲು, ಆ ಹಣವನ್ನು ಕಲಬುರ್ಗಿಯ ಜನರ ಸೇವೆಗೆ ಬಳಸಿದ್ದರೆ ಪಟ್ಟೇದಾರರು ಹೆಚ್ಚು ಎತ್ತರಕ್ಕೇರುತ್ತಿದ್ದರು.
–ಪಿ.ಜೆ.ರಾಘವೇಂದ್ರ, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.