ಬಾಪು, ನಿಮ್ಮ ಸತ್ಯ,
ಅಹಿಂಸೆ, ಶಾಂತಿಯ ನಡೆ
ಈಗಿನ ನಮ್ಮ ನಾಯಕರಿಗೆ
ಹತ್ತಲಾಗದ ಗೋಡೆ
ಆದರೆ ನಮಗೆ ಬೇಕಿದೆ
ನಿಮ್ಮ ಆದರ್ಶಗಳ ಮಾರ್ಗ
ನಿಮ್ಮ ಪಥದಲ್ಲಿ ನಡೆದರೆ
ಉಂಟು ಈ ದೇಶಕ್ಕೆ ಸ್ವರ್ಗ
ಇನ್ನಾದರೂ ನಮ್ಮ ನೇತಾರರು
ಪಾಲಿಸಲಿ ನಿಮ್ಮ ಆದರ್ಶ
ಇಲ್ಲದಿರೆ ಇಡೀ ನಾಡೇ
ಕಳೆದುಕೊಂಡೀತು
ನೆಮ್ಮದಿ, ಶಾಂತಿಯ ಸ್ಪರ್ಶ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.