ADVERTISEMENT

ಡೆಂಗೆಗೆ ತತ್ತರಿಸಿದ ಊಳೂರು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 19:30 IST
Last Updated 17 ಅಕ್ಟೋಬರ್ 2012, 19:30 IST

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಗಡಿಭಾಗದ ಗ್ರಾಮ ಊಳೂರು ಡೆಂಗೆಯಿಂದ ತತ್ತರಿಸಿದ ವರದಿಯಾಗಿದೆ. ಕಳೆದ ಒಂದು ತಿಂಗಳಿಂದಲೂ ಗ್ರಾಮದ ಪ್ರತಿ ಕುಟುಂಬಗಳೂ ಜ್ವರದಿಂದ ಬಳಲುತ್ತಿವೆ.

ಗ್ರಾಮದ 60ಕ್ಕೂ ಹೆಚ್ಚಿನ ಜನರು ಬಳ್ಳಾರಿಯ ಖಾಸಗಿ, ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರ ಆರೋಗ್ಯ ಇಲಾಖೆಯು ಈ ಊರಿನಲ್ಲಿ ಚಿಕಿತ್ಸಾ ಘಟಕವನ್ನು ತೆರೆದು ಡೆಂಗೆಯನ್ನು ತಡೆಯಬೇಕಾಗಿದೆ. 
         
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.