ಅಧಿಕಾರಕ್ಕಾಗಿ ವಾಮ
ಮಾರ್ಗದ ಬಳಕೆ
ಪರಿಣಾಮ ಬೆಂಬಿಡದ
ಜೀವ ಬೆದರಿಕೆ
ತೊಡೆ ತಟ್ಟಲಷ್ಟೇ
ಸೀಮಿತವಾಯ್ತು
ಉತ್ತರಕುಮಾರರ
ಎದೆಗಾರಿಕೆ!
ಶುದ್ಧವಿದ್ದಿದ್ದರೆ ನಡತೆ
ಬೇಕಿತ್ತೆ ಆರಕ್ಷಕರ ಭದ್ರತೆ?
ಲಪಟಾಯಿಸಿದರೆ
ಪರರ ಸ್ವತ್ತು
ಕಾಡದಿರುವುದೇ ಆಪತ್ತು!
ಸಜ್ಜನರಾಳಿದ ಕನ್ನಡ ನಾಡಿದು
ಬೆಚ್ಚದ ಕೆಚ್ಚೆದೆ ಸಂಸ್ಕೃತಿ
ದುರ್ಬಲರಂತೆ ರಕ್ಷಣೆ ಬಯಸಿ
ಮಾಡಿದರು ಘನತೆ ಅವನತಿ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.