ADVERTISEMENT

ದೊಡ್ಡವರ ವರದಿಯಲ್ಲಿ?

ಸಾಮಗ ದತ್ತಾತ್ರಿ
Published 3 ಮಾರ್ಚ್ 2014, 19:30 IST
Last Updated 3 ಮಾರ್ಚ್ 2014, 19:30 IST

ಶಾಲಾ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಸಾಮಾ­ನ್ಯ­ವಾಗಿ ಒಂದು ಪ್ರಶ್ನೆ ಇರುತ್ತದೆ: ನೀವು ಇತ್ತೀಚೆಗೆ ಕೈಗೊಂಡ ಪ್ರವಾಸ ಅಥವಾ ನೋಡಿದ ಪ್ರೇಕ್ಷಣೀಯ ಸ್ಥಳದ ಬಗ್ಗೆ  ಪ್ರಬಂಧ ಬರೆಯಿರಿ– ಈ ತೆರನ ಪ್ರಶ್ನೆ. ನಮ್ಮ ಶಾಸಕರು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಿಗೆ ಸರ್ಕಾರದ ವತಿ­ಯಿಂದ ಜನರ ತೆರಿಗೆ ಹಣ ಬಳಸಿಕೊಂಡು, ‘ಅಧ್ಯ­ಯನ ಪ್ರವಾಸ’ ಎಂಬ ಹೆಸರಿನಲ್ಲಿ  ಪ್ರವಾಸ ಹೋಗಿ ಬಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರು. ಈ ವರದಿಯಲ್ಲಿ  ಶಾಸಕರು ಕಂಡ, ತಿಳಿದುಕೊಂಡ ಮತ್ತು ನಮ್ಮ ರಾಜ್ಯದಲ್ಲೂ ಜಾರಿಗೆ ತರಬೇಕೆಂಬ ಅಂಶಗಳ ಪ್ರಸ್ತಾಪವಿದೆ.

ಹಸು–ಕುರಿಗಳು ಮೇಯುವುದು, ಬೆಂಗಳೂರಿನ ವಂಡರ್‌­ಲಾ ಅಂತಹ ವಿನೋದ ತಾಣಗಳು, ಹೆದ್ದಾರಿ­ಗಳಲ್ಲಿ  ಶೌಚಾಲಯ,  ರಸ್ತೆ ನಿಯಮ ಪಾಲನೆ ಇಂಥವುಗಳನ್ನು ಕಂಡು ಬೆರಗಾಗಿ ಶಾಸಕರು ಶ್ರದ್ಧೆಯಿಂದ ವರದಿ ಕೊಟ್ಟಿ­ದ್ದಾರೆ. ಇವರು ಕಂಡದ್ದ­ರಲ್ಲಿ ಏನು ಹೊಸತನ­ವಿದೆ? ಅಲ್ಲಿಗೆ ಹೋಗಿಯೇ ಇವನ್ನೆಲ್ಲ ತಿಳಿದು­ಕೊಳ್ಳ­ಬೇಕಾಗಿತ್ತೇ? ಇಂಥ ಶುಷ್ಕ ವರದಿ ಸಿದ್ಧ­ಗೊ­ಳಿಸುವ ಬದಲು ಸುಮ್ಮನಿ­ರಬಹುದಿತ್ತು. ಇದು ಸರ್ಕಾರಿ ದಾಖಲೆಯಾಗ­ಬೇಕೇ?

ರಾಜ್ಯಕ್ಕೆ ಇಂಥ ವರದಿಗಳಿಂದ ಆಗುವ ಪ್ರಯೋಜನ ಶೂನ್ಯ. ಎಂದಾಗ ಜನರ ಹಣ ಹಿಂದಿರುಗಿಸಬೇಕಾ­ಗು­ತ್ತದಲ್ಲವೇ? ಮಕ್ಕಳು ಪ್ರಾಮಾಣಿಕವಾಗಿ ಬರೆಯುವ ಉತ್ತರದಲ್ಲಿ ಲವಲವಿಕೆ, ಜ್ಞಾನದ ಹಸಿವು ಕಾಣಲು ಸಾಧ್ಯ. ದೊಡ್ಡವರ ವರದಿ­ಯಲ್ಲಿ?
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.