ADVERTISEMENT

ದ್ರಾವಿಡ್ ಗೌರವದ ವಿದಾಯ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST

ರಾಹುಲ್ ದ್ರಾವಿಡ್ ಅವರ ವಿದಾಯದ ಪತ್ರಿಕಾಗೋಷ್ಠಿಯನ್ನು ಟೀವಿ ಪರದೆಯ ಮೇಲೆ ನೋಡುತ್ತಿದ್ದಂತೆ ಪ್ರಜಾವಾಣಿ ಹಿಂದೆ ನಡೆಸಿದ ಓದುಗರ ಸಮೀಕ್ಷೆ ನೆನಪಾಯಿತು. `ಕ್ರಿಕೆಟ್ ತ್ರಿಮೂರ್ತಿಗಳಿಗೆ ವಿದಾಯ ಹೇಳಬೇಕೇ? ಎಂಬುದು ಸಮೀಕ್ಷೆಯ ವಿಷಯ.

ಆ ಮೂವರಲ್ಲಿ ಸೌರವ್ ಗಂಗೂಲಿ 2008ರ ಅಕ್ಟೋಬರ್ 7ರಂದು ನಿವೃತ್ತರಾದರು. ಈಗ ದ್ರಾವಿಡ್. `ನಾನು ಸರಿಯಾದ ಕಾರಣಗಳಿಗಾಗಿ ಆಡುತ್ತಿದ್ದೇನೆ ಎನಿಸಬೇಕು~ ಎಂದು ಸೌಮ್ಯವಾಗಿ ಅವರು ಹೇಳಿದ್ದಾರೆ.

ಜಾಹೀರಾತು ಕಂಪೆನಿಗಳಿಗೆ ಆಟ ಮುಂದುವರಿಸಿರುವ `ಮೂರನೆ~ಯವರು ಯಾವಾಗ ನಿವೃತ್ತಿ ನಿರ್ಧರಿಸುತ್ತಾರೆ?

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.