‘ಹೆಗಲ ಮೇಲೆ ಕೈ ಹಾಕಿ ಎಂಥದ್ದೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಮನೋಭಾವ ನನ್ನದು’ ಎಂದು ಚಂಪಾ ಅವರು ಹೇಳಿದ್ದಾರೆ (ಪ್ರ.ವಾ., ನ.27). ಆದರೆ ಅವರ ನಡೆ ಹಾಗಿಲ್ಲ. ತಮ್ಮ ವಿಚಾರಕ್ಕೆ ಅನುಗುಣವಾಗಿಲ್ಲದಿರುವವರನ್ನು ‘ಕನ್ನಡ ದ್ರೋಹಿಗಳು’ ಎಂದಿರುವ ಪತ್ರಿಕಾ ತುಣುಕು ನನ್ನಲ್ಲಿದೆ. ತಮ್ಮ ವಿಚಾರ, ಅಜೆಂಡಾ ಏನೇ ಇರಲಿ, ಅದನ್ನು ಸಾಹಿತ್ಯ ಸಮ್ಮೇಳನದ ವೇದಿಕೆಗೆ ಚಂಪಾ ತರಬಾರದಾಗಿತ್ತು.
-ಎಚ್.ಎಸ್. ಮಂಜುನಾಥ, ಗೌರಿಬಿದನೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.