ADVERTISEMENT

ಬಸ್ ನಿಲ್ದಾಣ ನಿರ್ಮಿಸಿ

ಪೀರ್ ಲೋಹಾರ್
Published 15 ಜುಲೈ 2013, 19:59 IST
Last Updated 15 ಜುಲೈ 2013, 19:59 IST

ಹಳೆ ಮದ್ರಾಸ್ ರಸ್ತೆಯಲ್ಲಿರುವ ಬೆನ್ನಿಗಾನಹಳ್ಳಿಯ ಬಸ್ ನಿಲುಗಡೆ ಸ್ಥಳ ಸಮಸ್ಯೆಗಳ ಗೂಡಾಗಿದೆ. ಪ್ರತಿದಿನ ಇಲ್ಲಿಂದ ಮೂರ‌್ನಾಲ್ಕು ಸಾವಿರ ಜನ ಪ್ರಯಾಣಿಸುತ್ತಾರೆ. ಆದರೆ ಬಸ್‌ಗಾಗಿ ಕಾಯುವ ಜನರಿಗೆ ಮಳೆಯಿಂದ ರಕ್ಷಿಸಿಕೊಂಡು ನಿಲ್ಲಲು ಸೂಕ್ತ ನಿಲ್ದಾಣದ ಕೊರತೆ ಇದೆ.

ಅದಕ್ಕಾಗಿ ಜನ ರಸ್ತೆಯ ಹಿಂಬದಿಯಲ್ಲಿರುವ ಗೂಡಂಗಡಿಗಳ ಮುಂಭಾಗವನ್ನು ಆಶ್ರಯಿಸಬೇಕಾಗಿದೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನಹರಿಸಿ ಸಮಸ್ಯೆ ನಿವಾರಿಸಿದರೆ ಪ್ರಯಾಣಿಕರಿಗೆ ಪ್ರಯೋಜನವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT