ಜೆ.ಪಿ.ನಗರ ಎಂಟನೇ ಹಂತದ ಕೊತ್ತನೂರಿನಿಂದ ಶಿವಾಜಿನಗರಕ್ಕೆ ಒಂದೇ ಒಂದು ಬಸ್ ಸೌಲಭ್ಯವಿದೆ. ಬೆಳಿಗ್ಗೆ 8ರಿಂದ 8.30ರೊಳಗೆ ಅದು ಕೊತ್ತನೂರಿನಿಂದ ಹೊರಟು ಯಲಚೇನಹಳ್ಳಿ, ಬನಶಂಕರಿ, ಜಯನಗರ ಮಾರ್ಗವಾಗಿ ಶಿವಾಜಿನಗರಕ್ಕೆ ಬರುತ್ತದೆ.
ಈ ಮಾರ್ಗದಲ್ಲಿ ಶಿವಾಜಿನಗರಕ್ಕೆ ಇನ್ನೂ ಎರಡು ಬಸ್ಗಳನ್ನಾದರೂ ಒದಗಿಸುವ ಮೂಲಕ ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಜನಸಾಮಾನ್ಯರ ನಿತ್ಯದ ಬವಣೆಯನ್ನು ನೀಗುವಂತೆ ಮನವಿ.
-ನಿತ್ಯ ಪ್ರಯಾಣಿಕರು, ಕೊತ್ತನೂರು
**
ಎಂ.ಜಿ.ರಸ್ತೆಯ ಬಾರ್ಟನ್ ಸೆಂಟರ್ ಬಳಿ ಫುಟ್ಪಾತ್ ಹಾಳಾಗಿದೆ. ಕಳೆದ ಒಂದು ವಾರದಿಂದ ಪಾದಚಾರಿಗಳಿಗೆ ತೊಂದರೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.