ADVERTISEMENT

ಭಕ್ತಿಯೇ ಮುಖ್ಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 19:30 IST
Last Updated 27 ಅಕ್ಟೋಬರ್ 2017, 19:30 IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀನು ಸೇವಿಸಿ ಧರ್ಮಸ್ಥಳದ ಮಂಜುನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ವಿಚಾರ ವಿವಾದವಾಗಿದೆ.

ಆಹಾರ ಅವರವರ ಸಂಪ್ರದಾಯ, ಪದ್ಧತಿ ಹಾಗೂ ವಿವೇಚನೆಗೆ ಬಿಟ್ಟ ವಿಷಯ. ಸಸ್ಯಾಹಾರವನ್ನು ಸೇವಿಸಿದವರು ಮಾತ್ರ ದೇವಸ್ಥಾನಕ್ಕೆ ಭೇಟಿ ನೀಡಬೇಕೆಂಬ ಕಟ್ಟಪ್ಪಣೆ ಆಗಲೀ, ನಿಯಮವಾಗಲೀ ವೇದಶಾಸ್ತ್ರಗಳಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ.

ದೇವರಲ್ಲಿ ನಂಬಿಕೆ ಇರುವವರಿಗೆ, ಭಕ್ತ ಮತ್ತು ಭಗವಂತನ ಮಧ್ಯೆ ಭಕ್ತಿಯೇ ಪ್ರಧಾನವಾಗಿರುತ್ತದೆ.

ADVERTISEMENT

ಭಕ್ತ ಕುಂಬಾರ ಚಿತ್ರದ ಹಾಡಿನಲ್ಲಿ, ‘ಮಾನವ ಮೂಳೆ ಮಾಂಸದ ತಡಿಕೆ, ಅದರ ಮೇಲಿದೆ ತೊಗಲಿನ ಹೊದಿಕೆ’ಎಂಬ ಸಾಲುಗಳಿವೆ. ಮಾನವ ದೇಹ ಮೂಳೆ ಮಾಂಸಗಳ ಜೊತೆಗೆ ಮಲ ಮೂತ್ರಗಳನ್ನೂ ತುಂಬಿಕೊಂಡಿರುವುದು ಸತ್ಯವಲ್ಲವೇ? ಇಂಥ ಮಾನವ, ದೇವಸ್ಥಾನ ಪ್ರವೇಶಿಸಿದರೆ ದೇವಸ್ಥಾನ ಅಪವಿತ್ರವಾಗುತ್ತದೆಯೇ? ಕೊಲೆ, ಸುಲಿಗೆ, ಅತ್ಯಾಚಾರ, ಕಳ್ಳತನವನ್ನು ಮಾಡಿದವರು ದೇವಾಲಯವನ್ನು ಪ್ರವೇಶಿಸಿದರೆ ಲೋಪವಿಲ್ಲ. ಆದರೆ ಮಾಂಸ ಸೇವಿಸಿದವರು ಪ್ರವೇಶ ಮಾಡಿದರೆ ಅಪರಾಧವೇ?

ಸಿದ್ದರಾಮಯ್ಯ ಅವರು ಹೇಳಿದ ಹಾಗೆ, ಮಹಾ ಭಕ್ತನಾದ ಬೇಡರ ಕಣ್ಣಪ್ಪನು, ಬೇಟೆಯಾಡಿ ತಂದ ಮಾಂಸವನ್ನು ದೇವರಿಗೆ ಅರ್ಪಿಸಲಿಲ್ಲವೇ? ಭಗವಂತನಿಗೆ ನಂಬಿ ಬಂದವನ ‘ಭಕ್ತಿ’ ಮುಖ್ಯವೇ ಹೊರತು ಅವನ ಆಚಾರ, ವಿಚಾರ, ಆಹಾರ ಅಥವಾ ಮಡಿ–ಮೈಲಿಗೆ ಸಂಪ್ರದಾಯಗಳಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕು.

-ಡಾ. ಡಿ.ತಿಮ್ಮಯ್ಯ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.