ADVERTISEMENT

ಭೂಮಿ ಗುತ್ತಿಗೆ ಕೊಡಿ

​ಪ್ರಜಾವಾಣಿ ವಾರ್ತೆ
Published 29 ಮೇ 2018, 19:30 IST
Last Updated 29 ಮೇ 2018, 19:30 IST

ರೈತರ ಸಾಲಮನ್ನಾ ಮಾಡಿದರೆ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಉಂಟಾಗುತ್ತದೆ ಎಂಬುದು ಖಚಿತ. ಹಾಗಾದರೆ ರೈತರ ಬವಣೆಗೆ ಪರಿಹಾರವೇ ಇಲ್ಲವೇ? ಖಂಡಿತ ಇದೆ.

ರಾಜ್ಯದಲ್ಲಿರುವ ಗೋಮಾಳ ಒಳಗೊಂಡಂತೆ ವ್ಯವಸಾಯಯೋಗ್ಯ ಸರ್ಕಾರಿ ಭೂಮಿಯನ್ನು ಗುತ್ತಿಗೆ ನೀಡಿ, ಅದರಿಂದ ಬರುವ ಹಣದಿಂದ ರೈತರ ಸಾಲವನ್ನು ತೀರಿಸುವುದು ಒಂದು ಪರಿಹಾರ. ಬಳಕೆಯೇ ಆಗದಿರುವ ಲಕ್ಷಾಂತರ ಎಕರೆ ಭೂಮಿ ರಾಜ್ಯದಲ್ಲಿದೆ. ಅದನ್ನು ಫಲವತ್ತತೆಯ ಆಧಾರದಲ್ಲಿ 3 ವಿಭಾಗಗಳಾಗಿ ವಿಂಗಡಿಸಿ, ಪ್ರತಿ ವಿಭಾಗಕ್ಕೂ ದರ ನಿಗದಿಮಾಡಿ ಮೂರು ವರ್ಷಗಳಿಗೆ ಗುತ್ತಿಗೆ ನೀಡುವುದರಿಂದ ರೈತರ ಸಾಲವೂ ತೀರುತ್ತದೆ. ಉತ್ಪಾದ
ನೆಯೂ ಅಧಿಕವಾಗಿ ರಾಜ್ಯಕ್ಕೆ ಒಳ್ಳೆಯದಾಗುತ್ತದೆ.

– ನಾಗೇಂದ್ರ, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.