ಶುದ್ಧ ಕಾಯಕದಲಿ ಸೇವೆ
ಮಾಡುವುದನ್ನು ಬಿಟ್ಟು
ಅಡ್ಡದಾರಿಯಲಿ ಸಾಗುತ್ತಾ ....
ಕಂಡ - ಕಂಡ ದೇವರಿಗೆ
ಕೈಮುಗಿದರೇನು
ಗುಡಿ - ಗುಂಡಾರವ
ಸುತ್ತಿದರೇನು
ಜಪ - ತಪ, ಹೋಮ
ಮಾಡಿಸಿದರೇನು
ಬಿತ್ತಿದ ಬೇವಿಗೆ
ಬರುವುದೇನು ಮಾವು?
ಮಾಡಿದ ಅಪರಾಧಕ್ಕೆ
ತಪ್ಪುವುದೇನು ಶಿಕ್ಷೆ??
ಮಾಡಿದ್ದುಣ್ಣು ಮಹಾರಾಯ!!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.