ಕಡೂರಿನ ಎಸ್.ಎನ್. ಕೃಷ್ಣಮೂರ್ತಿ ಅವರು ‘ರಾಜಕೀಯ’ ಶಬ್ದವನ್ನು ವಿಶ್ಲೇಷಿಸುವಾಗ ಪುರಾಣಗಳಲ್ಲಿ ಹೆಸರಿಸಲಾದ ರಾಕ್ಷಸರ ಗುಣಸ್ವಭಾವದ ವ್ಯಕ್ತಿಗಳನ್ನು ಉದಾಹರಿಸುತ್ತಾ, ರಾವಣ, ಜರಾಸಂಧ, ಕೀಚಕ ಹಾಗೂ ಯಮ– ಇವರ ಹೆಸರುಗಳನ್ನು ಬಳಸಿಕೊಂಡಿದ್ದಾರೆ (ವಾ.ವಾ., ಮಾ.13). ಈ ನಾಲ್ವರು ವ್ಯಕ್ತಿಗಳಲ್ಲಿ ಮೊದಲಿನ ಮೂವರು ರಾಕ್ಷಸ ಗುಣಸ್ವಭಾವವನ್ನು ಹೊಂದಿದ್ದರು. ಆದರೆ, ನಾಲ್ಕನೆಯವನಾದ ‘ಯಮ’ ರಾಕ್ಷಸನಲ್ಲ ಹಾಗೂ ರಾಕ್ಷಸ ಗುಣಸ್ವಭಾವವನ್ನೂ ಹೊಂದಿಲ್ಲ. ಬದಲಿಗೆ, ಅವನು ಒಬ್ಬ ದೇವತೆ (ಮೃತ್ಯುದೇವತೆ).
ಎಲ್ಲ ಜೀವಿಗಳನ್ನೂ ಸರ್ವ ವಿಧದಲ್ಲಿಯೂ ಸರಿಸಮಾನವಾಗಿ ನೋಡುವ, ಅವರವರ ಪಾಪ– ಪುಣ್ಯಗಳ ಲೆಕ್ಕಾಚಾರವನ್ನು ಕರಾರುವಾಕ್ಕಾಗಿ ಇಡುವ, ಮರ್ತ್ಯ ಲೋಕದಲ್ಲಿ ಜೀವಿಗಳ ಸಮಯವು ಮುಗಿದ ನಂತರ ಅವುಗಳ ಪ್ರಾಣವನ್ನು ನಿಷ್ಕಾರುಣ್ಯವಾಗಿ ಈ ಲೋಕದಿಂದ ಸೆಳೆದೊಯ್ಯುವ ಹಾಗೂ ಜೀವಿಗಳ ಕರ್ಮಗಳಿಗೆ ಸರಿಯಾದ ಫಲವನ್ನು ಕೊಡುವ ಸಮಚಿತ್ತದ ದೇವತೆ ಎಂದರೆ ‘ಯಮ’. ಇಂತಹ ದೇವತೆಯನ್ನು ‘ರಾಕ್ಷಸ’ರ ಪಟ್ಟಿಗೆ ಸೇರಿಸಿದ್ದು ಎಳ್ಳಷ್ಟೂ ಸಮಂಜಸವಲ್ಲ.
ಉಡುಪಿ ಅನಂತೇಶ ರಾವ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.