ನಮ್ಮ ಮುಖ್ಯಮಂತ್ರಿಗಳು ಕೇಂದ್ರದ ಮಂತ್ರಿಯೊಬ್ಬರನ್ನು ‘ಅವನ್ಯಾವನ್ರೀ ಪೆಟ್ರೋಲಿಯಂ ಮಂತ್ರಿ’ ಎಂದು ಏಕವಚನ ಪ್ರಯೋಗಿಸಿರುವುದು ಅಸಹನೀಯ. ಇನ್ನು ರೋಷನ್ ಬೇಗರದೇನು? ‘ಯಥಾ ರಾಜಾ ತಥಾ ಪ್ರಜಾ’...
ಈ ಹಿಂದೆ ಒಮ್ಮೆ ಬಿ.ಎಸ್. ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರ ಬಗ್ಗೆ ಏಕವಚನ ಪ್ರಯೋಗಿಸಿದಾಗ ಸ್ವಯಂ ಮುಖ್ಯಮಂತ್ರಿಗಳೇ ಅದನ್ನು ವಿರೋಧಿಸಿದ್ದರು. ಒಟ್ಟಿನಲ್ಲಿ ನಾಲಿಗೆಗೆ ಅದರಲ್ಲೂ ರಾಜಕಾರಣಿಗಳ ನಾಲಿಗೆಗೆ ಆಚಾರವಿಲ್ಲ! ಕೋಪ ತಾಪಗಳು ವಸ್ತುನಿಷ್ಠವಾಗಿರಬೇಕೇ ವಿನಾ ವ್ಯಕ್ತಿನಿಷ್ಠವಾಗಿ ಅಲ್ಲ ಎಂಬ ಸಂಗತಿ ಇವರಿಗೇಕೆ ಅರ್ಥವಾಗುತ್ತಿಲ್ಲ?
ಎನ್. ನರಹರಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.