ಹನುಮ ವೀರನೆ ಭುವನ ಶೂರನೆ
ನಿನ್ನ ಜನಮ ಸಾರ್ಥಕಾ
ಹಿಮದ ಒಡಲಲಿ ಕಡಲು ಕೂಗಿತೆ
ಹೆತ್ತ ತಾಯಿಯೆ ಅದ್ಭುತಾ
ಬೆಟ್ಟದೂರಿನ ಗಟ್ಟಿ ಚೇತನ
ದಿಲ್ಲಿ ಕೂಗಿತು ಜೈ ಸಲಾಮ್
ನೆಲದ ಒಡಲಿನ ಅಗ್ನಿ ಚೀರಿತು
ತಾಯಿ ಭಾರತಿಗೆ ಸಲಾಮ್
ಧೀರ ಯೋಧನ ದೈತ್ಯ ಶಕ್ತಿಗೆ
ಭುವನ ಭಾರತಿ ಉಘೇ ಉಘೇ
ನೆಲದ ಮಣ್ಣಿನ ಸಿಡಿಲ ಕೆಂಡಕೆ
ಸಕಲ ಜನಮನ ಉಘೇ ಉಘೇ
ನೀನು ಬಾಳಿದೆ ನಮ್ಮ ಎದೆಯಲಿ
ಇಕೋ ಕೋಟಿಯ ವಂದನೆ
ನೀನು ಬೆಳಗಿದೆ ಗಡಿಯ ಗುಡಿಯಲಿ
ವಿಶ್ವ ಭಾರತಿ ವಂದನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.