‘ದುರದೃಷ್ಟದಿಂದ ಕ್ಯಾನ್ಸರ್?’ (ಪ್ರ.ವಾ. ಜ. 5) ಬಹುಪಾಲು ಕ್ಯಾನ್ಸರ್ ಪ್ರಕರಣಗಳಿಗೆ ‘ದುರದೃಷ್ಟ’ ಕಾರಣ ಎಂಬುದು ಇತ್ತೀಚಿನ ಒಂದು ಪಾಶ್ಚಾತ್ಯ ಸಂಶೋಧನೆಯಂತೆ! (ವಿಚಿತ್ರ‘ತಮ’ ಸುದ್ದಿಯೇ ಸರಿ)
‘ವೈಜ್ಞಾನಿಕ ಮೌಢ್ಯ’ಕ್ಕೆ ಪ್ರಖರ ನಿದರ್ಶನ ಎನ್ನಬಹುದೇ? ಹಣೆಬರಹ, ಗ್ರಹಚಾರ, ಕರ್ಮಫಲ ಮುಂತಾದ ಭಾರತೀಯ ನಂಬಿಕೆಗಳು ಈಗ ಪಶ್ಚಿಮಕ್ಕೂ ವಕ್ಕರಿಸಿಕೊಂಡದ್ದು ವಿಪರ್ಯಾಸ. ಪೂರ್ವಕ್ಕೆ ಪಶ್ಚಿಮದ ಸಮರ್ಥನೆ! (ನಮ್ಮ ಜ್ಯೋತಿಷಿಗಳಿಗೆ, ಪುರೋಹಿತರಿಗೆ ‘ಹಬ್ಬ’ ಎನ್ನೊಣವೇ?)
– ಸಿ.ಪಿ.ಕೆ., ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.