ADVERTISEMENT

ಸಿಬಿಐ ತನಿಖೆಯಿಂದ ಪರಿಣಾಮವಿಲ್ಲ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST

ಸೋನಿಯಾ ಅಳಿಯ ರಾಬರ್ಟ್ ವಾದ್ರಾ- ಡಿ.ಎಲ್.ಎಫ್. ಸಂಸ್ಥೆ ಮಧ್ಯೆ ನಡೆದಿರುವ ಭೂ ವ್ಯವಹಾರವನ್ನು ಸಿ.ಬಿ.ಐ. ತನಿಖೆಗೆ ಒಳಪಡಿಸಬೇಕೆಂಬ ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್‌ರ ಒತ್ತಡ ಸ್ವಾಗತಾರ್ಹವೇ. ಆದರೆ ಈ ತನಿಖೆಯಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ಸತ್ಯ.

ಸಿ.ಬಿ.ಐ. ಸರ್ಕಾರದ ಸಂಸ್ಥೆಯಾದರೂ, ಖಂಡಿತವಾಗಿಯೂ ಇದರ ಸಂಪೂರ್ಣ ಹಿಡಿತ ಕಾಂಗ್ರೆಸ್ ಕೈಯಲ್ಲಿದೆ ಎನ್ನುವುದು ತಿಳಿದಿರುವ ವಿಷಯವೇ. ಜೊತೆಗೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಇರುವುದರಿಂದ, ವಾದ್ರಾ ಹಾಗೂ ಡಿ.ಎಲ್.ಎಫ್. ಸಂಸ್ಥೆ ನಡೆಸುವ ವ್ಯವಹಾರವನ್ನು ಸಿ.ಬಿ.ಐ. ತನಿಖೆಯಿಂದ ಪರಿಶೀಲಿಸುವುದು ಅನವಶ್ಯಕ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.