ಮೆಟ್ರೊ ಕಾಮಗಾರಿಯಿಂದ ನಗರದ ವಾಣಿ ವಿಲಾಸ ಆಸ್ಪತ್ರೆಯಲ್ಲಿರುವ ಗರ್ಭಿಣಿಯರಿಗೆ, ಬಾಣಂತಿಯರಿಗೆ, ಮಕ್ಕಳಿಗೆ ಹಲವಾರು ಅನಾನುಕೂಲಗಳಾಗಿವೆ. ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜನಪ್ರತಿನಿಧಿಗಳು, ಶಾಸಕರು, ಸಚಿವರು, ಬಿ.ಬಿ.ಎಂ.ಪಿ. ವಾರ್ಡ್ ಸದಸ್ಯರು, ಸಚಿವರು ಇನ್ನೂ ಜಾಣ ಕುರುಡು, ಕಿವುಡು ನಟಿಸುತ್ತಿರುವುದು ಎಂತಹ ವಿಪರ್ಯಾಸ! ಮೆಟ್ರೊ ಕಾಮಗಾರಿ ನಡೆಯುತ್ತಿರುವುದು ನಗರದ ಬಹುತೇಕ ಪ್ರದೇಶಗಳ ರಸ್ತೆಗಳು, ಪಾದಚಾರಿ ರಸ್ತೆಗಳು ಹಾಳಾಗಿವೆ. ಸಂಚಾರ ದಟ್ಟಣೆ ಸಮಸ್ಯೆ ಉಂಟಾಗಿದೆ.
ಕಾಮಗಾರಿ ಧೂಳಿನಿಂದ ವಾಹನ ಚಾಲಕರಿಗೆ ಅಲರ್ಜಿ, ಕೆಮ್ಮು, ನೆಗಡಿ ಇನ್ನಿತರ ರೋಗಗಳು ಬಂದಿವೆ. ಇಷ್ಟಾದರೂ ರಾಜ್ಯ ಸರ್ಕಾರ, ಬಿ.ಬಿ.ಎಂ.ಪಿ., ಮೆಟ್ರೊ ಸಂಸ್ಥೆ ಸಚಿವರು, ಶಾಸಕರು, ಜನತೆಯ ಆರೋಗ್ಯಕ್ಕೆ ಧಕ್ಕೆಯಾಗದಂತೆ ಮೆಟ್ರೊ ಕಾಮಗಾರಿ ಕೈಗೊಳ್ಳಬೇಕು ಎನ್ನುವ ಎಚ್ಚರಿಕೆಯ ಕ್ರಮಗಳನ್ನು ನಾಗರೀಕತೆಯನ್ನು ಪ್ರದರ್ಶಿಸುವುದು ಎಂದು!?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.