ADVERTISEMENT

ಸ್ಮರಣ ಸಂಚಿಕೆಗೊಂದು ಕೋರಿಕೆ

ಆರ್‌.ಶಿವಶಂಕರ ಸೀಗೆಹಟ್ಟಿ, ಹಿರಿಯೂರು
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

2009ರಲ್ಲಿ ಚಿತ್ರದುರ್ಗದಲ್ಲಿ ನಡೆದ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇ­­ಳನದ ಸ್ಮರಣ ಸಂಚಿಕೆಗಳು ಓದುಗರಿಗೆ ಇದುವರೆವಿಗೂ ತಲುಪಿಲ್ಲ. ಪ್ರತಿ ವರ್ಷದ ಸಾಹಿತ್ಯ ಜಾತ್ರೆಯಲ್ಲಿ ವಿಚಾರಿಸಿದಾಗ ಇನ್ನೂ ಬಂದಿಲ್ಲವೆಂಬ ಉತ್ತರ ಬರುತ್ತದೆ. ಚಿತ್ರ­ದುರ್ಗ­ದಲ್ಲಿ ನಡೆದ ಸಮ್ಮೇ­ಳ­ನಕ್ಕಿಂತ ನಂತರದ ಸಂಚಿಕೆಗಳು ಕನ್ನಡ ಸಾಹಿತ್ಯ ಪರಿಷತ್‌ ಬಳಿ ಲಭ್ಯವಿದ್ದು ಅಮೃತ­ಮಹೋತ್ಸವದ ಸ್ಮರಣಸಂಚಿಕೆ ಈ ಬಾರಿಯೂ ಓದುಗರಿಗೆ ಲಭ್ಯವಾಗಿಲ್ಲ.

ಕಾರಣ ವಿಚಾರಿಸಿದಾಗ ಕಸಾಪ ಕೇಂದ್ರ ಸಮಿತಿಯು: ‘ಸ್ಮರಣಸಂಚಿಕೆಯನ್ನು ಮುದ್ರಿಸಿ ಕಳು­ಹಿ­ಸುವುದು ಅಲ್ಲಿಯ ಜಿಲ್ಲಾ ಸಮಿತಿಯ ಜವಾ­ಬ್ದಾರಿ­. ಅವರು ಕಳುಹಿಸಿಕೊಟ್ಟರೆ ಮಾತ್ರ ನಾವು ಮಾರಾಟ ಮಾಡಲು ಸಾಧ್ಯ’ ಎಂದು ತಿಳಿಸಿದೆ. ಸಮ್ಮೇಳನ ನಡೆದು 5 ವರ್ಷಗಳೇ ಸಂದರೂ ಆಸ­ಕ್ತರಿಗೆ ಸಂಚಿಕೆಗಳು ಲಭ್ಯವಾಗದಿರುವುದು ದುರ­­ದೃಷ್ಟ­ಕರ. ಸ್ಮರಣ ಸಂಚಿಕೆಗಳು ಕೇವಲ ಆಯ್ದ ಕೆಲವರ ಬಳಿ ಇದ್ದರೆ ಸಾಕೆ? ಆಸಕ್ತ ಓದುಗರಿಗೆ ಇವು ಸಿಗಬಾರದೆ?
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.