ADVERTISEMENT

ಸ್ವಾಗತಾರ್ಹ ತೀರ್ಪು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 19:30 IST
Last Updated 13 ಮಾರ್ಚ್ 2018, 19:30 IST

ಧರ್ಮಸೂಕ್ಷ್ಮ ಎಂಬುದೊಂದಿದೆ. ಅದು ಕೋರ್ಟ್‌ಗಳಿಗಿಂತ, ಸುಗ್ರೀವಾಜ್ಞೆಗಳಿಗಿಂತ ದೊಡ್ಡದು. ಆತ್ಮಹತ್ಯೆಗೂ ದಯಾಮರಣಕ್ಕೂ ವ್ಯತ್ಯಾಸವರಿಯದ ಆಡಳಿತಗಾರರು ದಯಾಮರಣ ಬೇಡಿಕೆಯನ್ನು ವಿರೋಧಿಸುತ್ತಲೇ ಬಂದಿದ್ದರು. ಸಾವಿನ ಘನತೆಯು ಬದುಕಿನ ಘನತೆಗೆ ಸಮ ಎಂದು ಸುಪ್ರೀಂ ಕೋರ್ಟ್‌ ಚಿಂತಿಸಿ, ಚಿಂತಿತರನ್ನು ಪಾರು ಮಾಡಿದೆ. ಸಲ್ಲೇಖನ ತೆಗೆದುಕೊಳ್ಳಲು ಸರ್ಕಾರ ಬಿಡುತ್ತೋ ಇಲ್ಲವೋ ಎಂಬ ಅನುಮಾನ ಕಾಡುತ್ತಿತ್ತು. ಜೈನನಲ್ಲದಿದ್ದರೆ ಕೊಡದೆ ಸತಾಯಿಸಬಹುದು ಎಂದು ಹೆದರಿದ್ದೆ. ಜೈ ‘ಸುಪ್ರೀಂ’, ಜೈ ಸಾವಿನ ಘನತೆ.

ಎಂ. ರಾಮಶೇಷು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT