ಬೆಂಗಳೂರಿನ ಕೇಂದ್ರ ರೈಲು ನಿಲ್ದಾಣದಲ್ಲಿ ಜಾಹೀರಾತು ಹಾವಳಿಯಿಂದ ಜನರು ಕಷ್ಟಪಡುವಂತಾಗಿದೆ. ರೈಲುಗಳ ವೇಳಾಪಟ್ಟಿ ತಿಳಿದುಕೊಳ್ಳಲು, ತಡ ಸಂಚಾರದ ಮಾಹಿತಿ ಅರಿಯಲು ಟೀವಿಗಳನ್ನು ಗಮನಿಸುತ್ತಾ ಐದು– ಹತ್ತು ನಿಮಿಷ ನಿಂತರೂ ಜಾಹೀರಾತುಗಳು ಮುಗಿಯುವುದೇ ಇಲ್ಲ.
ಟಿಕೆಟ್ ಖರೀದಿಗೆ ನಾವು ಕೊಡುವ ಹಣಕ್ಕಿಂತ ಜಾಹೀರಾತುದಾರರು ಕೊಡುವ ಹಣವೇ ರೈಲ್ವೆ ಇಲಾಖೆಗೆ ಹೆಚ್ಚಾಯಿತೇ? ರೈಲ್ವೆ ಅಧಿಕಾರಿಗಳು ಪ್ರಯಾಣಿಕರ ಸಂಕಷ್ಟ ಅರಿತು ಸೂಕ್ತ ಕ್ರಮ ಜರುಗಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.