ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಮಂತ್ರಿಗಳಾಗಿರುವುದು ಸಂತೋಷದ ಸಂಗತಿ. ಈಗ ಜನರ ನಿರೀಕ್ಷೆಗಳು ಪುನಃ ಚಿಗುರೊಡೆದಿವೆ.
ರಾಜ್ಯದ ಅನೇಕ ರೈಲ್ವೆ ಯೋಜನೆಗಳ ಪೈಕಿ ಚಿತ್ರದುರ್ಗದಿಂದ- ಹಿರಿಯೂರು-ಶಿರಾ ಮಾರ್ಗವಾಗಿ ತುಮ ಕೂರಿಗೂ ಹಾಗೂ ಮೈಸೂರಿಗೂ ಬೆಂಗಳೂರು- ತುಮಕೂರು- ಶಿರಾ-ಹಿರಿಯೂರು ಮಾರ್ಗ ವಾಗಿ ಚಿತ್ರದುರ್ಗ ಮತ್ತು ಹಿರಿಯೂರಿನಿಂದ ಚಳ್ಳಕೆರೆಗೆ ರೈಲ್ವೆ ಮಾರ್ಗವಾದರೆ ಇಲಾಖೆಗೂ ಲಾಭವಾಗುವುದಲ್ಲದೆ ಪ್ರಯಾಣಿಕರ ಸಂಚಾರ ಹಾಗೂ ಸರಕು ಸಾಗಾಣಿಕೆಗೆ ತುಂಬಾ ಅನುಕೂಲವಾಗುತ್ತದೆ.
ಈಗ ಬಹುತೇಕ ಸರಕು ಸಾಗಣೆ ಲಾರಿಗಳಲ್ಲಿಯೇ ಆಗುತ್ತಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಮೇಲಿನ ರೈಲ್ವೆ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸುತ್ತಾರೆಂಬುದು ನಮ್ಮ ನಂಬಿಕೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.