ADVERTISEMENT

ಹೊಗಳುಭಟ್ಟರಿಂದ ಹಾದಿ ತಪ್ಪಿದರು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 19:30 IST
Last Updated 18 ಅಕ್ಟೋಬರ್ 2011, 19:30 IST

ಯಡಿಯೂರಪ್ಪನವರು ಅಧಿಕಾರ ಕಳೆದುಕೊಂಡು ಜೈಲು ಪಾಲಾಗುವುದಕ್ಕೆ  ಅವರು ತಮ್ಮ ಹೊಗಳುಭಟ್ಟರ ಮಾತುಗಳನ್ನು ನಿಜವೆಂದು ನಂಬಿದ್ದು! ಅನೇಕ ಮಂತ್ರಿಗಳು, ಶಾಸಕರು, ತಮ್ಮ ಸ್ವಾರ್ಥ ಸಾಧಿಸಿಕೊಳ್ಳಲು ಯಡಿಯೂರಪ್ಪನವರು ಯಾವ ತಪ್ಪನ್ನೂ ಮಾಡಿಲ್ಲ. ಅವರು ಮಾಡಿದ್ದೆಲ್ಲವೂ  ಸರಿಯಾಗಿದೆಯೆಂದು ಮಂತ್ರ ಜಪಿಸತೊಡಗಿದರು.

ಅಷ್ಟೇ ಅಲ್ಲ, ಅವರ  ಭ್ರಷ್ಟಾಚಾರದ ಆಪಾದನೆಗಳೆಲ್ಲ ವಿರೋಧಿ ಪಕ್ಷದವರ, ಮಾಧ್ಯಮದವರ ಸೃಷ್ಟಿಯೆಂದು ಕೂಗಾಡ ಹತ್ತಿದರು. ಈ ಮಾತನ್ನು ನಿಜವೆಂದೇ ನಂಬಿದ ಅವರು ತಮ್ಮ ಆಡಳಿತ ವೈಖರಿಯನ್ನು ಬದಲಿಸಿಕೊಳ್ಳದೆಯೇ ಮುಂದುವರಿದರು.

ಅದೇ ಅವರು ಅಧಿಕಾರ ಕಳೆದುಕೊಂಡು ಜೈಲು ಸೇರಲು ಕಾರಣವಾಯಿತೇನೋ.  ಯಡಿಯೂರಪ್ಪನವರ ಮುಖಸ್ತುತಿ ಮಾಡಿ ಅವರನ್ನು ದಾರಿ ತಪ್ಪಿಸಿದವರಲ್ಲಿ ಕೆಲವು ಮಂತ್ರಿಗಳು ಮತ್ತು ಮಠಾಧೀಶರೂ ಭಾಗಿಯಾಗಿರುವುದು ಈ ದುಃಸ್ಥಿತಿಗೆ ಕಾರಣವಾಗಿದೆ.                                                                                           
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.