ADVERTISEMENT

ಹೊಸ ಭರವಸೆ

ಪ್ರೊ.ಕೆ.ಎಸ್.ಭಗವಾನ್, ಮೈಸೂರು
Published 3 ಜೂನ್ 2013, 19:59 IST
Last Updated 3 ಜೂನ್ 2013, 19:59 IST

ಕರ್ನಾಟಕದಲ್ಲಿ ಹೊಸ ಸರ್ಕಾರ ಬಂದು ನೆಲೆಗೊಳ್ಳುತ್ತಿದೆ. ಹಿಂದಿನ ಹೋಮ ಹವನ ನಿಂತಿದೆ ಎನ್ನಬಹುದು. ಆದರೂ ಕೆಲವರು ಸಚಿವರು ತಮ್ಮ ತಮ್ಮ ಕಚೇರಿಯಲ್ಲಿ ಪೂಜೆ ಮಾಡಿದ್ದಾರೆ/ಮಾಡಿಸಿದ್ದಾರೆ. ಜನರ ಕಷ್ಟ ಕಾರ್ಪಣ್ಯಗಳನ್ನು ಹೋಗಲಾಡಿಸಿ ಅವರು ಸುಖವಾಗಿ ಬದುಕುವಂತೆ ಮಾಡುವುದೇ ನಿಜವಾದ ಪೂಜೆ ಎಂದು ತಿಳಿಯುವ ಅಗತ್ಯ ಇದೆ.

ಆರಾಧನೆ, ಯಜ್ಞ, ಇತ್ಯಾದಿಯೆಲ್ಲ ವಂಚನೆ ಎಂದು ಜನರು ಅರಿಯಬೇಕು.

ಸಚಿವ ಆಂಜನೇಯ ಅವರು ರಾಹುಕಾಲ ಗುಳಿಕಕಾಲ ನೋಡದೆ, ಊದುಬತ್ತಿ ಉರಿಸದೆ, ಗಂಟೆ ಬಾರಿಸದೆ ವಿಶ್ವಗುರು ಬಸವಣ್ಣ ಮತ್ತು ವಿಶ್ವಬಂಧು ಮರುಳಸಿದ್ಧರ ಚಿತ್ರಪಟಗಳಿಗೆ ಹಾರ ಹಾಕುವುದರ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.