ADVERTISEMENT

ಹೊಸ ವರ್ಷಕ್ಕೆ ಕೆಟ್ಟ ಕೊಡುಗೆ

ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ
Published 2 ಜನವರಿ 2014, 19:30 IST
Last Updated 2 ಜನವರಿ 2014, 19:30 IST

ಕಳಂಕಿತರನ್ನು ಸಚಿವ ಸಂಪುಟಕ್ಕೆ  ಸೇರಿಸಿ ಕೊಳ್ಳುವುದಿಲ್ಲ ಎಂದು ಹೇಳಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್,  ಕೊಟ್ಟ ಮಾತನ್ನು ತಪ್ಪಿ ಸಂಪುಟದಲ್ಲಿ ಕಳಂಕಿತರಿಗೆ ಅವಕಾಶ ಕಲ್ಪಿಸಿರುವುದು ಸರಿಯಲ್ಲ.

ಹೊಸ ವರ್ಷದ ಆರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಡಿ.ಕೆ.ಶಿವಕುಮಾರ್ ಹಾಗೂ ರೋಷನ್ ಬೇಗ್ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡಿರುವುದು ಜನತೆಗೆ ಕೊಟ್ಟ ಕೆಟ್ಟ ಕೊಡುಗೆಯಾಗಿದೆ. ನಾಲ್ಕು  ರಾಜ್ಯಗಳ ಚುನಾವಣಾ ಫಲಿ­ತಾಂಶ­ದಿಂದ ಹೈರಾಣಾಗಿ­ರುವ ಕಾಂಗ್ರೆಸ್, ಲೋಕ­ಸಭಾ ಚುನಾವಣೆ­ಯಲ್ಲಿ ಹೇಗಾದರೂ ಹೆಣ­ಗಾಡಿ ಗೆಲ್ಲಲು ನೀತಿ, ನಿಯಮ ಗಾಳಿಗೆ ತೂರಿ, ಜಾತಿ ಮತ್ತು ಹಣ ಬಲಕ್ಕೆ ಶರಣಾಗುತ್ತಿರುವುದು ದುರದೃಷ್ಟಕರ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.