ಸ್ವಚ್ಛ ಆಡಳಿತ ನಡೆಸಲಿಕ್ಕೆ
ಮುಂದಿನ ಚುನಾವಣೆಗಳಲ್ಲಿ
ಪಕ್ಷ ಗೆಲ್ಲಿಸಲಿಕ್ಕೆ
ದಕ್ಷ ಆರೋಪಿಗಳಿಗೂ
ಅಧಿಕಾರ ಕೊಡಬೇಕಂತೆ!
ಕಮಲವರಳಲಿಕ್ಕೆ
ಕಮಾಲ್ ತೋರಿಸಲಿಕ್ಕೆ
ಪಕ್ಷಕ್ಕೆ ಬರಲೇಬೇಕಂತೆ
ಜೈಲಿಗೆ ಹೋಗಿದ್ದು
ಬಂದಿರುವ ನಾಯಕರು!
ಅವರು ಬೇಡಾ ಅಂತ
ಇವರ ‘ಕೈ’ ಹಿಡಿದೆತ್ತಿದ್ದಕ್ಕೆ
ಈಗ
ಕಪಾಳಕ್ಕೆ ಹೊಡೆಸಿಕೊಳ್ಳ
ಬೇಕಾಯ್ತಲ್ಲವೆ?
ಹರ ಹರಾ ಪರಮೇಶ್ವರಾ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.