ADVERTISEMENT

ವಿ.ವಿ ಉದಾಸೀನ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST

ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ತಡವಾಗಿ ಅಂದರೆ ಜನವರಿ 1ರಿಂದ ಆರಂಭವಾಗಿದೆ. ಮುಷ್ಕರದ ಬಿಸಿಯೂ ತಟ್ಟಿದೆ. ಅರ್ಧದಷ್ಟೂ ಬೋಧಕರು ಹಾಜರಾಗಿಲ್ಲ. ಈ ಗೈರುಹಾಜರಿಗೆ ಆಯಾ ಕಾಲೇಜಿನ ಪ್ರಾಂಶುಪಾಲರನ್ನೇ ನೇರ ಹೊಣೆ ಮಾಡಬೇಕು.

ಆದರೆ ಕ್ರಮ ತೆಗೆದುಕೊಳ್ಳಬೇಕಾದ ವಿಶ್ವವಿದ್ಯಾಲಯಕ್ಕೆ ಮತ್ತು ಕಾಲೇಜು ಶಿಕ್ಷಣ ಇಲಾಖೆಗೆ ಇಚ್ಛಾಶಕ್ತಿಯ ಹಾಗೂ ಮಾಹಿತಿಯ ಕೊರತೆ ಇದೆ. ಈ ಹಿಂದೆ ಮೌಲ್ಯಮಾಪನಕ್ಕೆ ಗೈರುಹಾಜರಾದವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಯಾವ ಉಪನ್ಯಾಸಕರನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂಬುದರ ಬಗ್ಗೆ ವಿಶ್ವವಿದ್ಯಾಲಯ ಬಳಿ ಮಾಹಿತಿಯೇ ಇಲ್ಲ. ‘ಮೌಲ್ಯಮಾಪನದಲ್ಲಿ ಭಾಗವಹಿಸಿದ್ದಾರೆ’ ಎಂಬ ಪತ್ರವಿಲ್ಲದೆ ವೇತನ ಬಿಡುಗಡೆ ಮಾಡಲಾಗುತ್ತಿದೆ. ಅನೇಕ ಬೋಧಕರು ಹೆಚ್ಚುವರಿ ರಜೆಯಲ್ಲಿ ಮುಳುಗಿದ್ದಾರೆ.ಜನವರಿ 10 ರಿಂದ ಕಾಲೇಜುಗಳು ಪುನಃ ಆರಂಭಗೊಳ್ಳ ಬೇಕಿದೆ. ಅದು ಖಂಡಿತ ಸಾಧ್ಯವಾಗುವುದಿಲ್ಲ. ಸೆಮಿಸ್ಟರ್‌ ಮಧ್ಯೆ ಚುನಾವಣೆ ಬರಲಿದೆ. ವಿದ್ಯಾರ್ಥಿಗಳಿಗೆ ತೊಂದರೆ ಯಾಗಲಿದೆ. ಅಧಿಕಾರಿಗಳ ಉದಾಸೀನ ಮತ್ತು ಕಣ್ಣಾಮುಚ್ಚಾಲೆಗೆ ವಿದ್ಯಾರ್ಥಿಗಳು ಬಲಿಪಶುಗಳಾಗುತ್ತಿದ್ದಾರೆ. ಸಣ್ಣಪುಟ್ಟ ತಪ್ಪಿಗೆ, ವಿಳಂಬಕ್ಕೆ ವಿದ್ಯಾರ್ಥಿಗಳಿಂದ ಸಾವಿರಗಟ್ಟಲೆ ದಂಡ ಪೀಕಿಸುವ ವಿಶ್ವವಿದ್ಯಾಲಯವು ಫಲಿತಾಂಶ ವಿಳಂಬಕ್ಕೆ ದಂಡ ಪಾವತಿ ಮಾಡುತ್ತದೆಯೇ? ನಾಚಿಕೆಯಾಗಬೇಡವೇ? ಬೋಧಕರ ಸಂಘಗಳು, ಶಿಕ್ಷಣ ಕ್ಷೇತ್ರದ ರಾಜಕೀಯ ಪ್ರತಿನಿಧಿಗಳು ಇತ್ತ ಗಮನಹರಿಸಬೇಡವೇ?

–ಚಂದ್ರಶೇಖರ್‌ ಸಿ., ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.