ADVERTISEMENT

ಲಘುಕಂಪದ ಪರಿಣಾಮ!

​ಪ್ರಜಾವಾಣಿ ವಾರ್ತೆ
Published 25 ಜನವರಿ 2018, 19:30 IST
Last Updated 25 ಜನವರಿ 2018, 19:30 IST

ಸೂಕ್ಷ್ಮ ಪ್ರಕರಣಗಳನ್ನು ನ್ಯಾಯಮೂರ್ತಿಗಳಿಗೆ ಹಂಚಿಕೆ ಮಾಡುವ ಪ್ರಕ್ರಿಯೆಯ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವ ಕ್ರಮಕ್ಕೆ ಮುಖ್ಯ ನ್ಯಾಯಮೂರ್ತಿ ಮುಂದಾಗಿದ್ದಾರೆ (ಪ್ರ.ವಾ., ಜ. 22) ಎಂಬುದು ಸ್ವಾಗತಾರ್ಹ ಸಂಗತಿ.

ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿಯ ಕಾರ್ಯವೈಖರಿ ಬಗ್ಗೆ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದು, ಭೂಮಿ ನಡುಗಿಸುವಷ್ಟು ದೊಡ್ಡ ಸುದ್ದಿಯಲ್ಲದಿದ್ದರೂ, ಸಾಧಾರಣ ಸಂಗತಿಯೇನೂ ಆಗಿರಲಿಲ್ಲ. ಕ್ರಾಂತಿಯನ್ನಲ್ಲದಿದ್ದರೂ ಇದು ತನ್ನ ಉದ್ದೇಶಿತ ಕೆಲಸ ಮಾಡಿರುವುದು ನಿಜ. ನ್ಯಾಯಾಂಗ ನಿರ್ವಹಣೆಯಲ್ಲಿ ಏನಾದರೊಂದು ಐಬು ಇದ್ದಿರಬಹುದೆಂಬ ಸಾರ್ವಜನಿಕರ ಅನುಮಾನವನ್ನು, ಮುಖ್ಯ ನ್ಯಾಯಮೂರ್ತಿಗಳ ಕ್ರಮ ಸಾಬೀತುಗೊಳಿಸಿದೆ. ಆ ಮೂಲಕ, ದೇಶದ ನ್ಯಾಯಾಂಗದ ಮೇಲೆ ಜನರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವಂಥ ಕೆಲಸವೂ ಆಗಿದೆ.

– ಆರ್. ಕೆ. ದಿವಾಕರ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.