‘ಸಿದ್ದರಾಮಯ್ಯ ಅವರನ್ನು ಪುನಃ ಮುಖ್ಯಮಂತ್ರಿ ಮಾಡಿ ಋಣ ತೀರಿಸಿ’ ಎಂದು ಪರಿಶಿಷ್ಟ ಜಾತಿಯ ಉದ್ಯಮಿಗಳಿಗೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಮನವಿ ಮಾಡಿದ್ದು ವರದಿಯಾಗಿದೆ.
ಮುಖ್ಯಮಂತ್ರಿ ಅವರ ಜೇಬಿನಿಂದ ಹಣ ಖರ್ಚು ಮಾಡಿ ಸವಲತ್ತುಗಳನ್ನು ಕೊಟ್ಟರೇ, ಋಣ ತೀರಿಸಲು? ಜನರ ತೆರಿಗೆಯ ಹಣದಿಂದ ಮಾಡಿದ ಕೆಲಸ ಹೇಗೆ ಋಣವಾದೀತು? ಪರಿಶಿಷ್ಟ ವರ್ಗದವರು ಮುಖ್ಯಮಂತ್ರಿಗೆ ಋಣಿಯಾಗಿರಬೇಕು ಎಂದು ಆಂಜನೇಯ ನಿರೀಕ್ಷಿಸುವುದು ಎಷ್ಟು ಸರಿ?
ಕೊ.ಸು.ನರಸಿಂಹ ಮೂರ್ತಿ, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.