ಕರ್ನಾಟಕದಲ್ಲಿ ಮೊದಲ ಬಾರಿ ರಚನೆಯಾಗಿದ್ದ ಬಿಜೆಪಿ ಸರ್ಕಾರವನ್ನು ಮತ್ತು ಕೇಂದ್ರದಲ್ಲಿ ಯುಪಿಎ–2 ಸರ್ಕಾರವನ್ನು ಜನರು ಕಿತ್ತೊಗೆಯಲು ಈ ಸರ್ಕಾರಗಳ ಅವಧಿಯಲ್ಲಿ ನಡೆದಿದ್ದ ಹಗರಣಗಳೇ ಕಾರಣ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಮರೆಯಬಾರದು.
ಮೋದಿ ಅವರು ಈ ಹಿಂದೆ ಮನಮೋಹನ್ ಸಿಂಗ್ ಅವರನ್ನು ‘ಮೌನ್ ಮೋಹನ್’ ಎಂದು ಹಂಗಿಸಿದ್ದರು. ಈಗ ಇವರು ಮಾಡುತ್ತಿರುವುದೇನು? ವಿರೋಧ ಪಕ್ಷಗಳ ಯಾವ ಪ್ರಶ್ನೆಗೂ ಮೋದಿ ಉತ್ತರಿಸುವುದಿಲ್ಲ. ಹಗರಣಗಳ ಬಗ್ಗೆ ಮಾತನಾಡದಿದ್ದರೆ ನಡೆದೇ ಇಲ್ಲವೆಂದು ಅರ್ಥವಲ್ಲ. ಇದನ್ನು ಮೋದಿ ಬೇಗ ಅರಿತುಕೊಳ್ಳಬೇಕು.
ಕೃಷ್ಣಮೂರ್ತಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.