ಎ.ಸೂರ್ಯಪ್ರಕಾಶ್ ಅವರು ತಮ್ಮ ಅಂಕಣ ‘ಸೂರ್ಯ ನಮಸ್ಕಾರ’ದಲ್ಲಿ (ಪ್ರ.ವಾ., ಏ.10) ‘ನಮೋ’ ನಮಸ್ಕಾರ ಮಾಡಿದಂತಿದೆ. ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಕೆದಕಿ, ಅವರು ಹಿಂದೆ ಮಾಡಿದ ತಪ್ಪುಗಳನ್ನು ವಿವರಿಸಿದ್ದಾರೆ.
ಅದು ನಿಜವೂ ಹೌದು ಮತ್ತು ಆ ಕಾರಣಕ್ಕಾಗಿಯೇ ಬಿಜೆಪಿ ಅಥವಾ ಅದರ ಮಾತೃ ಸಂಸ್ಥೆ ಜನಸಂಘ ಒಳಗೊಂಡಂತೆ ಆಗಿನ ಎಲ್ಲ ವಿರೋಧ ಪಕ್ಷಗಳು, ನಾಯಕರು ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಾ ಬಂದು, ಅದರಲ್ಲಿ ಯಶ ಕಂಡದ್ದು. ಆದರೆ, ಮತ್ತೀಗ ಅದೇ ತಪ್ಪುಗಳನ್ನು ಈಗಿನ ಆಳುವ ಪಕ್ಷವೇ ಮಾಡುತ್ತಿದ್ದು, ಅಂತಹ ತಪ್ಪುಗಳನ್ನು ಹಿಂದೆ ಮಾಡಿದ್ದ ಪಕ್ಷವೇ ಅದನ್ನು ವಿರೋಧಿಸುವ ವಿಪರ್ಯಾಸದ ಪರಿಸ್ಥಿತಿಯಲ್ಲಿ ಭಾರತ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.