ADVERTISEMENT

ಕೊನೆಯಿಲ್ಲದ ಅಸಹನೀಯ ಮಾತು

ಎನ್.ನರಹರಿ
Published 2 ಏಪ್ರಿಲ್ 2019, 20:15 IST
Last Updated 2 ಏಪ್ರಿಲ್ 2019, 20:15 IST

ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪನವರು ರಾಹುಲ್ ಗಾಂಧಿ ಅವರನ್ನು ‘ಬಚ್ಚಾ’ ಅಂದರು. ಅದಕ್ಕೆ ದಿನೇಶ್ ಗುಂಡೂರಾವ್ ‘ಇದು ಯಡ್ಡಿಯವರ ಸಂಸ್ಕೃತಿಯನ್ನು ತೋರಿಸುತ್ತದೆ’ ಎಂದರು. ಕೆಲ ದಿನಗಳ ಹಿಂದೆ ಇದೇ ಗುಂಡೂರಾವ್ ಅವರು ‘ನರೇಂದ್ರ ಮೋದಿ ಅವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ’ ಎಂದು ಕಾರ್ಯಕರ್ತರಿಗೆ ಕರೆಯಿತ್ತಿದ್ದರು. ರಾಹುಲ್ ಗಾಂಧಿ ಮೋದಿಯವರನ್ನು ‘ಕಳ್ಳ’ ಎಂದರೆ, ಸಿದ್ದರಾಮಯ್ಯನವರು ‘ಮೋಸಗಾರ, ನರಭಕ್ಷಕ’ ಎನ್ನುತ್ತಾರೆ. ರೇವಣ್ಣ, ಕುಮಾರಸ್ವಾಮಿಯವರಂತೂ ಸುಮಲತಾ ಅವರ ಜನ್ಮ ಜಾಲಾಡುತ್ತಿದ್ದಾರೆ.

ಬಿಜೆಪಿಯ ಸುರೇಶ್‌ ಗೌಡರು ಶಾಸಕ ಗೌರಿಶಂಕರ್ ಅವರಿಗೆ ‘ದೊಣ್ಣೆಯಿಂದ ಹೊಡೆಯಿರಿ’ ಎಂದು ಜನರಿಗೆ ಆದೇಶಿಸುತ್ತಾರೆ. ಅನಂತಕುಮಾರ ಹೆಗಡೆ ಅವರಂತೂ ರಾಹುಲ್ ಗಾಂಧಿ ಕುಟುಂಬದ ಮಾನ ಹರಾಜಿಗೆ ಇಳಿದಿದ್ದಾರೆ. ಮೊನ್ನೆ ಕಾಂಗ್ರೆಸ್ ಶಾಸಕರೊಬ್ಬರು ‘ಮೋದಿಗೆ ಕಲ್ಲು ಹೊಡೆಯಿರಿ’ ಎಂದರು. ಬೇಳೂರು ಗೋಪಾಲಕೃಷ್ಣ ಅವರು ‘ಮೋದಿಯನ್ನು ಸಾಯಿಸಿರಿ’ ಎಂದು ಹುಕುಂ ಹೊರಡಿಸಿದರು... ಹೀಗೆ ಕೊನೆಯಿಲ್ಲದ ಅಸಹನೀಯ ಮಾತುಗಳು! ಕಾಂಗ್ರೆಸ್ಸಿಗರು, ಜೆಡಿಎಸ್‌ನವರು ಹೇಳಿದಾಗ ಬಿಜೆಪಿಯವರು, ಬಿಜೆಪಿಯವರು ಹೇಳಿದಾಗ ಮಿತ್ರಪಕ್ಷಗಳು ಸಂಸ್ಕೃತಿಯ ಬಗ್ಗೆ ಭಾಷಣ ಬಿಗಿಯುವುದು ಮಹಾ ಚೋದ್ಯವಾಗಿದೆ. ಈ ರಾಜಕಾರಣಿಗಳ ನಾಲಿಗೆ ಆಚಾರವುಳ್ಳದ್ದು ಆಗುವುದು ಯಾವಾಗ?

- ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.