ಪೌರತ್ವ ತಿದ್ದುಪಡಿ ಕಾಯ್ದೆಯು ಕೆಲವರನ್ನು ಏಕೆ ಇಷ್ಟೆಲ್ಲಾ ಕಂಗೆಡಿಸಿದೆ? ಮತೀಯ ಕಾರಣಗಳಿಂದ ದೌರ್ಜನ್ಯಕ್ಕೆ ಒಳಗಾಗಿ, ಅದರ ಪರಿಣಾಮವಾಗಿ ಭಾರತಕ್ಕೆ ನುಸುಳಿ ಬಂದವರಿಗೆ ಪೌರತ್ವ ನೀಡುವುದರಿಂದ ಯಾರಿಗೂ ತೊಂದರೆಯಾಗದು. ಈ ಕಾಯ್ದೆಯು ಯಾರ ಹಕ್ಕನ್ನೂ ಕಿತ್ತುಕೊಳ್ಳುವುದಿಲ್ಲ. ಇಲಿ ಹೋಯಿತು ಎಂದರೆ ಹುಲಿ ಹೋಯಿತು ಎನ್ನುವ ಹಾಗೆ ಪ್ರತಿಕ್ರಿಯೆ ನೀಡುವುದು ಸರಿಯೇ?
-ಎಸ್. ರಾಜೇಂದ್ರ ಜೆಟ್ಟಿ,ಯಳಂದೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.