ADVERTISEMENT

ರಾಷ್ಟ್ರರಂಜನ ಸಮಿತಿ!

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 20:00 IST
Last Updated 25 ಜೂನ್ 2019, 20:00 IST

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಹಿನ್ನಡೆಗೆ ಸಮರ್ಥ ಕಾರಣ ಕೊಡಲಾರದ ರಾಹುಲ್ ಗಾಂಧಿ ‘ಯುದ್ಧಕಾಲೇ ಶಸ್ತ್ರತ್ಯಾಗಃ’ ಎಂಬಂತೆ, 17ನೇ ಲೋಕಸಭೆಯು ಕಾರ್ಯಾರಂಭ ಮಾಡುವುದರೊಳಗೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ‘ಕೈ’ಕಟ್ಟಿ ಕೂತುಬಿಟ್ಟಿದ್ದಾರೆ! ಲೋಕಸಭೆಯಲ್ಲೂ ಅವರು ಕೂರಂಬುಸದೃಶ ಪ್ರಶ್ನೆಗಳನ್ನು ಪ್ರತಿಬಾಣಸದೃಶ ಉತ್ತರಗಳಿಂದ
ಎದುರಿಸಲಾರದೆ ಅಧೀರರಾಗಿ, ಅಧೀರ್‌ ರಂಜನ್‌ ಚೌಧರಿಯವರಿಗೆ ಆ ಕೆಲಸ ಬಿಟ್ಟುಕೊಟ್ಟಿದ್ದಾರೆ!

ಚೌಧರಿಯವರು ಲೋಕಸಭೆಯಲ್ಲಿ ‘ಗಂಧಿ ನಾಲಿ’, ‘ರಾಷ್ಟ್ರೀಯ ಮೀಸೆ’ ಮುಂತಾದ ಚೌಚೌ ಮಾತುಗಳ ರಂಜನೆಯ ಜೊತೆಗೆ, ಸೋನಿಯಾ- ರಾಹುಲ್ ಕುರಿತು ಧೀರತನದ ಸವಾಲೊಂದನ್ನೆಸೆದು ಇಡೀ ದೇಶಕ್ಕೆ ರಂಜನೆ ನೀಡಿದ್ದಾರೆ. ಇತ್ತ ದೇವೇಗೌಡರು, ಸಿದ್ದರಾಮಯ್ಯ ಮೊದಲಾದವರು ಕಾಂಗ್ರೆಸ್ಸನ್ನು ಸಖತ್ತಾಗಿ ಕುಣಿಸುತ್ತಿದ್ದಾರೆ! ಒಟ್ಟಾರೆ, ಕಾಂಗ್ರೆಸ್ ಪಕ್ಷವು ರಾಷ್ಟ್ರರಂಜನ ಸಮಿತಿಯಾಗಿಬಿಟ್ಟಿದೆ!

- ಎಚ್.ಆನಂದರಾಮ ಶಾಸ್ತ್ರೀ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.