ADVERTISEMENT

ಚಾಲಕರೇ, ಎಚ್ಚರ... ಮಲೆನಾಡಿನ ರಸ್ತೆಗಳಲ್ಲಿ ಜೀವಿಗಳ ಜೀವ ತೆಗೆದೀರಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 19:45 IST
Last Updated 7 ಜುಲೈ 2019, 19:45 IST

ಮಲೆನಾಡಿನ ರಸ್ತೆಗಳಲ್ಲಿ ವಾಹನ ಓಡಿಸುವಾಗ ಚಾಲಕರು ಈಗ ಅತ್ಯಂತ ಎಚ್ಚರಿಕೆಯಿಂದ ಇರುವುದು ಒಳಿತು. ಕಪ್ಪೆ, ಹಾವಿನಂತಹ ಜೀವಿಗಳ ಸಂತಾನೋತ್ಪತ್ತಿಯ ಕಾಲ ಇದು. ಸಂಜೆಯ ವೇಳೆ ಇವು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತವೆ. ಚಾಲಕರು ಇವನ್ನೆಲ್ಲ ಗಮನಿಸದೆ ವಾಹನ ಚಲಾಯಿಸಿದರೆ ಅವು ದೊಡ್ಡ ಪ್ರಮಾಣದಲ್ಲಿ ಸಾಯುತ್ತವೆ. ರಾತ್ರಿ ವೇಳೆ ಮುಂದಿನ ಎರಡು ತಿಂಗಳ ಕಾಲ ಮೈಯೆಲ್ಲ ಕಣ್ಣಾಗಿಸಿಕೊಂಡು ವಾಹನ ಓಡಿಸಬೇಕು. ಮಲೆನಾಡು ಭಾಗದಲ್ಲಿ ಮಳೆಗಾಲದಲ್ಲಿ ಪ್ರವಾಸ ಚಟುವಟಿಕೆ ಕಡಿಮೆ ಇದ್ದಷ್ಟೂ ಒಳಿತು. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು. ಪ್ರವಾಸಿಗರ ವೈಯಕ್ತಿಕ ಸುರಕ್ಷೆ, ಸ್ಥಳೀಯರ ಅನುಕೂಲ ಹಾಗೂ ಪರಿಸರದ ರಕ್ಷಣೆಗೆ ಸ್ವಲ್ಪಮಟ್ಟಿಗಿನ ನಿರ್ಬಂಧ ಅಗತ್ಯ.

ಇದು, ಮೀನುಗಳ ಸಂತಾನೋತ್ಪತ್ತಿಯ ಕಾಲವೂ ಹೌದು. ಹಾಗಾಗಿ ಮೀನುಗಾರರು ಹೊಳೆಗಳಲ್ಲಿ ದೊಡ್ಡ ಮಟ್ಟದಲ್ಲಿ ಮೀನು ಹಿಡಿಯದಿರುವುದು ಒಳ್ಳೆಯದು. ಮುಂದೆಯೂ ಮೀನುಗಳು ಬೇಕಲ್ಲವೇ? ಅವು ಮೊಟ್ಟೆ ಇಡುವಾಗಲೇ ಹಿಡಿದುಬಿಟ್ಟರೆ! ಸಮುದ್ರದ ಮೀನುಗಾರಿಕೆಗೆ ಈ ಕಾರಣದಿಂದಲೇ ನಿರ್ಬಂಧ ಇದೆ. ಆದರೆ ಒಳನಾಡಿನ ಮೀನುಗಾರಿಕೆಗೆ, ವಿಶೇಷವಾಗಿ ಹೊಳೆಗಳಿಗೆ ನಿರ್ಬಂಧ ಇದ್ದಂತಿಲ್ಲ. ಜನಸಂಖ್ಯೆ ಮಿತಿಮೀರಿದೆ. ನಮ್ಮ ಹೊಟ್ಟೆ ತುಂಬಿಸಲು ಸಾಕಾಗುವಷ್ಟು ಜೀವಿಗಳು ಪರಿಸರದಲ್ಲಿ ಉಳಿದಿಲ್ಲ, ಜೊತೆಗೆ ಪರಿಸರ ನಾಶ. ಹಾಗಾಗಿ ಒಂದಿಷ್ಟು ಮಿತಿಗಳನ್ನು ನಾವೇ ಹಾಕಿಕೊಳ್ಳಲೇಬೇಕಾಗಿದೆ.

ಕೃಷಿಕ ಎ.ವಿ.,ಶೃಂಗೇರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.