ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ರೋಗಕ್ಕೆ ಚಿಕಿತ್ಸೆ, ಔಷಧಿಯನ್ನು ಉಚಿತವಾಗಿ ನೀಡಬೇಕು. ಆದರೆ ವೈದ್ಯರು ಚಿಕಿತ್ಸೆ ನೀಡಿದ ನಂತರ ಔಷಧಿಯನ್ನು ಹೊರಗಿನಿಂದ ತರುವಂತೆ ಚೀಟಿ ಬರೆದುಕೊಡುತ್ತಾರೆ. ಇದು ಕೂಡಜಿಲ್ಲಾಸ್ಪತ್ರೆಯ ಔಷಧ ಅಂಗಡಿಗಳಲ್ಲಿಯೇ ಸಿಗಬೇಕು.
ದುರದೃಷ್ಟವೆಂದರೆ, ಹೀಗೆ ಬರೆದಂತಹ ಒಂದೋ ಎರಡೋ ಔಷಧಿಗಳು ಮಾತ್ರ ಅಲ್ಲಿ ದೊರೆಯುತ್ತವೆ. ಉಳಿದವನ್ನು ಖಾಸಗಿ ಔಷಧಿ ಅಂಗಡಿಗಳಲ್ಲಿ ಖರೀದಿಸಿ ತರಬೇಕಾಗುತ್ತದೆ.
ಹೀಗಾದಾಗ ಸರ್ಕಾರದ ಉಚಿತ ಚಿಕಿತ್ಸೆ, ಔಷಧಿ ಯೋಜನೆ ಸಾರ್ವಜನಿಕರಿಗೆ ಸಿಗದಂತಾಗುತ್ತದೆ. ಎಲ್ಲ ರೋಗಗಳಿಗೂ ಚಿಕಿತ್ಸೆ, ಔಷಧಗಳು ಜಿಲ್ಲಾ ಆಸ್ಪತ್ರೆಗಳಲ್ಲಿಯೇ ದೊರೆಯುವಂತೆ ಮಾಡಬೇಕಾದುದು ಸರ್ಕಾರದ ಕರ್ತವ್ಯ.
– ದಾವಣಗೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.