ADVERTISEMENT

ವಾಚಕರ ವಾಣಿ: ಗಾಂಧೀಜಿ ಪ್ರಸ್ತಾಪ ಅಪ್ರಸ್ತುತ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 18:43 IST
Last Updated 27 ಆಗಸ್ಟ್ 2020, 18:43 IST

‘ಗಾಂಧಿ ಬಜಾರ್‌ನಲ್ಲಿ ಏಕಾಂಕ!’ ಎಂಬ ರವೀಂದ್ರ ಭಟ್ಟರ ಲೇಖನವು (ಪ್ರ.ವಾ., ಆ. 27) ಕಾಂಗ್ರೆಸ್ ಪಕ್ಷದ ಇಂದಿನ ದುಃಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಒಂದೇ ಕುಟುಂಬದ ಅಥವಾ ವ್ಯಕ್ತಿಯ ಅಧೀನಕ್ಕೊಳಪಟ್ಟ ಯಾವುದೇ ಪಕ್ಷ ಹೆಚ್ಚು ಕಾಲ ಬಾಳಲಾಗದು. ನಾಯಕ ಕೇಂದ್ರಿತವಾಗುತ್ತಿರುವ ಭಾರತದ ಇಂದಿನ ರಾಜಕಾರಣದ ಪರಿಸ್ಥಿತಿಯಲ್ಲಿ, ಸಮರ್ಥ ನಾಯಕನೊಬ್ಬನನ್ನು ಹುಡುಕಿಕೊಳ್ಳದಿದ್ದರೆ ಪಕ್ಷ ಇನ್ನಷ್ಟು ಅವನತಿಗೆ ಹೋಗಲಿದೆ.

ಲೇಖನದ ಮೊದಲ ಪ್ಯಾರಾದಲ್ಲಿ ಲೇಖಕರು ‘ಮಹಾತ್ಮ ಗಾಂಧಿಯಿಂದ ಹಿಡಿದು ಇಂದಿರಾ ಗಾಂಧಿ, ರಾಜೀವ್ ಗಾಂಧಿವರೆಗೆ ಎಲ್ಲರೂ ಇಂತಹ ನಾಟಕಗಳನ್ನು ಸಾಕಷ್ಟು ಆಡಿದ್ದಾರೆ. ಈಗ ರಾಹುಲ್ ಸರದಿ ಅಷ್ಟೆ’ ಎಂದಿದ್ದಾರೆ. ಇಲ್ಲಿ ಮಹಾತ್ಮ ಗಾಂಧಿ ಅವರ ಪ್ರಸ್ತಾಪ ಆಭಾಸವೆನಿಸುತ್ತದೆ. ಕಾಂಗ್ರೆಸ್ಸಿನಲ್ಲಿ ನಾಯಕತ್ವಕ್ಕಾಗಿ ಗಾಂಧೀಜಿ ಇಂತಹ ನಾಟಕವನ್ನು ಯಾವಾಗ ಆಡಿದ್ದರು ಎಂಬುದನ್ನು ಉದಾಹರಣೆಯೊಂದಿಗೆ ವಿವರಿಸಿದ್ದರೆ ಓದುಗರಲ್ಲಿ ಸ್ಪಷ್ಟತೆ ಮೂಡುತ್ತಿತ್ತು.

-ಪ್ರತಿಭಾ ಪಿ. ದೊಗ್ಗಳ್ಳಿ,ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.