ADVERTISEMENT

ಬೆಳೆ ಪರಿಹಾರ ಕೊಡಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 16:48 IST
Last Updated 31 ಆಗಸ್ಟ್ 2018, 16:48 IST

ಈ ಬಾರಿ ಮಳೆಯ ಕೊರತೆಯಿಂದಾಗಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತೊಗರಿ, ಹತ್ತಿ, ಸೂರ್ಯಕಾಂತಿ, ದ್ರಾಕ್ಷಿ, ಕಬ್ಬು ಮುಂತಾದ ಅನೇಕ ಬೆಳೆಗಳು ಒಣಗಿ ಹೋಗಿವೆ. ರೈತರು ಕಂಗಾಲಾಗಿದ್ದಾರೆ. ಇವುಗಳ ಬಿತ್ತನೆಗೆ ಮಾಡಿದ ವೆಚ್ಚವೂ ವಾಪಸ್ ಬರದಂತಾಗಿದೆ.

ಸಾಲ ಮನ್ನಾ ಮಾಡುವ ಮೂಲಕ ಸಾವಿರಾರು ರೈತರಿಗೆ ನೆಮ್ಮದಿ ಕೊಟ್ಟಿರುವ ರಾಜ್ಯ ಸರ್ಕಾರವು ಈ ಭಾಗದ ರೈತರ ಬೆಳೆನಷ್ಟಕ್ಕೂ ಸೂಕ್ತ ಪರಿಹಾರ ಕೊಟ್ಟು ರೈತರನ್ನು ಉಳಿಸಬೇಕು.

ಮುತ್ತು ಕುಂಟೋಜಿ, ಹುಣಶ್ಯಾಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.