ಬೆಂಗಳೂರಿನ ನಾಗಸಂದ್ರದ ನಿವಾಸಿ, ಎಂಜಿನಿಯರಿಂಗ್ನ ಅಂತಿಮ ವರ್ಷದ ವಿದ್ಯಾರ್ಥಿ ಎಚ್.ಎಂ.ದಿನೇಶ್ಗೆ ಎರಡೂ ಮೂತ್ರಪಿಂಡಗಳಲ್ಲಿ ಸಮಸ್ಯೆಯಾಗಿದ್ದು, ಚಿಕಿತ್ಸೆ ಕೊಡಿಸಲು ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ.ದಿನೇಶ್ ರ್ಯಾಂಕ್ ವಿದ್ಯಾರ್ಥಿ. ಅವರ ತಂದೆ ಮಂಜುನಾಥ್ ನಿಧನರಾಗಿದ್ದು, ತಾಯಿ ರಾಧಮ್ಮ ಗಾರ್ಮೆಂಟ್ಸ್ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಕಡುಬಡತನದಿಂದ ಮಗನಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ. ತೀವ್ರತರವಾದ ಮೂತ್ರಪಿಂಡ ಸಮಸ್ಯೆಗೆ ಒಳಗಾಗಿದ್ದು ಚಿಕಿತ್ಸೆಗೆ ಅಂದಾಜು ₹ 6 ಲಕ್ಷ ಅಗತ್ಯವಿದೆ.15 ದಿನಗಳ ಒಳಗೆ ಚಿಕಿತ್ಸೆ ಕೊಡಿಸಬೇಕಿದೆ. ಡಯಾಲಿಸಿಸ್ಗೆ ಈಗಾಗಲೇ ಬಹಳಷ್ಟು ಹಣ ವ್ಯಯವಾಗಿದೆ. ದಾನಿಗಳು ನೆರವು ನೀಡಿದರೆ ಸಹಾಯವಾಗಲಿದೆ. ಬ್ಯಾಂಕ್ ಖಾತೆ ಸಂಖ್ಯೆ: 20476957934, ಐಎಫ್ಎಸ್ ಕೋಡ್: SBIN0010369, ಬಿಇಎಲ್ ಫ್ಯಾಕ್ಟರಿ ಕ್ಯಾಂಪಸ್ ಶಾಖೆ, ಭಾರತೀಯ ಸ್ಟೇಟ್ ಬ್ಯಾಂಕ್, ಬೆಂಗಳೂರು. ಸಂಪರ್ಕ ಸಂಖ್ಯೆ: 9844392984.
-ಮೇರಿಯಮ್ಮ, ದಲಿತ ಕ್ರಿಶ್ಚಿಯನ್ ಅಸೋಸಿಯೇಷನ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.