‘ಪಾಕಿಸ್ತಾನದಲ್ಲಿ 400 ಹಿಂದೂ ದೇಗುಲಗಳ ಜೀರ್ಣೋದ್ಧಾರ’ (ಪ್ರ.ವಾ., ಏ.12) ಸುದ್ದಿ ಓದಿ ಪುಳಕಗೊಂಡೆ. ಅಲ್ಲಿನ ಸರ್ಕಾರ ಇಂತಹ ತೀರ್ಮಾನ ತೆಗೆದುಕೊಂಡಿರುವುದು ಸ್ತುತ್ಯರ್ಹ.
ಪ್ರತೀ ವರ್ಷ ಎರಡರಿಂದ ಮೂರು ಪುರಾತನ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿರುವುದು ನಿಜಕ್ಕೂ ಉಭಯ ದೇಶಗಳ ಬಾಂಧವ್ಯವನ್ನು ವೃದ್ಧಿಸುವ ಕ್ರಮ.
ಈ ಯೋಜನೆಗೆ ಪಾಕಿಸ್ತಾನವು ಭಾರತದ ಸಹಕಾರ ಅಪೇಕ್ಷಿಸಿದರೆ ಟಾಟಾ, ಬಿರ್ಲಾ, ಅಂಬಾನಿ, ನಾರಾಯಣ ಮೂರ್ತಿ ಸೇರಿದಂತೆ ಹಲವಾರು ದಾನಿಗಳು ನೆರವಿನ ಹಸ್ತ ಚಾಚಲು ಮುಂದೆ ಬರಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.