ADVERTISEMENT

ಕರ್ಣಾನಂದಕರ ಆಗಿರಲಿ

​ಪ್ರಜಾವಾಣಿ ವಾರ್ತೆ
Published 14 ಮೇ 2019, 20:15 IST
Last Updated 14 ಮೇ 2019, 20:15 IST

ಆಕಾಶವಾಣಿಯಲ್ಲಿ ಈ ಹಿಂದೆ ರಣಜಿ ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆಯನ್ನು ಕೇಳಿದಾಗ, ನಾವು ಸ್ವತಃ ಕ್ರಿಕೆಟ್ ನೋಡಲು ಹೋದರೂ ಸಿಗದಷ್ಟು ಆನಂದ ಸಿಗುತ್ತಿತ್ತು. ಅಂತಹ ಮಾತಿನ ಮೋಡಿಯ ಮೂಲಕ ಆಟದ ಮಾಹಿತಿಯನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ವಿವರಿಸುತ್ತಿದ್ದರು.

ಈ ವರ್ಷ ಐಪಿಎಲ್ ಪಂದ್ಯದ ವೀಕ್ಷಕ ವಿವರಣೆಯನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ವೀಕ್ಷಿಸಿದಾಗ, ವೀಕ್ಷಕ ವಿವರಣೆಕಾರರ ಪದ ಬಳಕೆ, ಮಾತಿನ ವೈಖರಿ ‘ಅಯ್ಯೋ ಇವರು ವಿವರಣೆ ಕೊಡದೇ ಇದ್ದರೆ ಚೆನ್ನಾಗಿತ್ತು’ ಎನ್ನಿಸುವಂತಿತ್ತು. ಅದಕ್ಕಿಂತ ಇಂಗ್ಲಿಷ್ ಅಥವಾ ಹಿಂದಿಯ ವೀಕ್ಷಕ ವಿವರಣೆ ಇರುವ ಕ್ರಿಕೆಟ್ ಪಂದ್ಯ ನೋಡಿದ್ದಿದ್ದರೇ ವಾಸಿ ಎನಿಸುತ್ತಿತ್ತು.

ಮುಂದೆ ವಿಶ್ವಕಪ್ ಕ್ರಿಕೆಟ್ ಪಂದ್ಯ ಇದೆ. ಆ ವೀಕ್ಷಕ ವಿವರಣೆಯೂ ಕರ್ಣ ಕಠೋರ ಆಗದೆ, ಕರ್ಣಾನಂದಕರ ಆಗಿರುವಂತೆ ಉತ್ತಮ ವೀಕ್ಷಕ ವಿವರಣೆಕಾರರನ್ನು ಸಂಘಟಕರು ನಿಯೋಜಿಸಲಿ.

ADVERTISEMENT

– ಎಂ.ಪರಮೇಶ್ವರ,ಮದ್ದಿಹಳ್ಳಿ, ಹಿರಿಯೂರು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.