ADVERTISEMENT

ಖಾತೆಗಾಗಿ ಕ್ಯಾತೆ ಸರಿಯೇ?

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 19:30 IST
Last Updated 8 ಆಗಸ್ಟ್ 2021, 19:30 IST

‘ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯನೇರ ಬಯಸುವರುವೀರರೂ ಅಲ್ಲ ಧೀರರೂ ಅಲ್ಲ’ ಎಂಬ ಅಲ್ಲಮನ ವಾಣಿಯನ್ನು ಖಂಡಿತವಾಗಿಯೂ ನೆನಪಿಸುತ್ತದೆ ಖಾತೆಗಾಗಿ ಕ್ಯಾತೆ ತೆಗೆಯುತ್ತಿರುವ ಇಂದಿನ ಮಂತ್ರಿಗಳ ಹುಚ್ಚಾಟ.

ಕೊರೊನಾ ಸಂಕಷ್ಟದ ಈಗಿನ ಪರಿಸ್ಥಿತಿಯಲ್ಲಿ ಹಲವರು ಬದುಕಿನ ಬಗ್ಗೆಯೇ ಭರವಸೆ ಕಳೆದು ಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಕೊಟ್ಟ ಖಾತೆಯನ್ನು ನಿರ್ವಹಿಸದೆ ಇಂತಹುದೇ ಖಾತೆ ಬೇಕೆಂದು ಪಟ್ಟು ಹಿಡಿಯುವುದು ಎಷ್ಟು ಸರಿ? ಕೊಟ್ಟ ಖಾತೆ ಬೇಡವೆಂದವರ ಮಂತ್ರಿಗಿರಿ ರದ್ದುಪಡಿಸಿ ಹೊಸಬರಿಗೆ ಮಣೆ ಹಾಕಲು ಮುಖ್ಯಮಂತ್ರಿಗೆ ಇದೊಂದು ಸುವರ್ಣ ಅವಕಾಶ. ಅವರು ಈ ದಿಸೆಯಲ್ಲಿ ಕಾರ್ಯತತ್ಪರರಾದರೆ ಖಂಡಿತ ಅವರಿಗೆ ರಾಜ್ಯದ ಜನರ ಬೆಂಬಲ ಸಿಗಲಿದೆ.

ಪ್ರಕಾಶ್ ಮಲ್ಕಿ ಒಡೆಯರ್,ಹೂವಿನಹಡಗಲಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.