ಕಾರ್ಮಿಕರಿಗೆ ವೇತನ ಹಂಚಿಕೆಯಲ್ಲಿರುವ ಅಸಮಾನತೆ ಕುರಿತ ಅಂಕಿ ಅಂಶಗಳನ್ನೊಳಗೊಂಡ ವರದಿಯನ್ನು (ಪ್ರ.ವಾ., ಮೇ 23) ಓದಿ ಚಕಿತನಾದೆ. ಇದು, ದೇಶದಲ್ಲಿರುವ ಆರ್ಥಿಕ ಅಸಮಾನತೆಯ ಸ್ಪಷ್ಟ ಚಿತ್ರಣ ನೀಡಿದೆ. ದೇಶದ ಪ್ರಗತಿಗೆ ಕಾರ್ಮಿಕ ಶಕ್ತಿ ಪೂರಕ. ಆದರೆ ನಮ್ಮಲ್ಲಿ ಮಾನವ ಸಂಪನ್ಮೂಲ ಯೋಜನೆ ಇದ್ದಂತೆ ಕಾಣುವುದಿಲ್ಲ. ಇದರಿಂದಾಗಿ ಆ ಶಕ್ತಿಯು ವೃಥಾ ಪೋಲಾಗುತ್ತಿದೆ. ಇರುವಂಥ ಕಾರ್ಮಿಕರೂ ಸರಿಯಾದ ವೇತನ ಪಡೆಯದಿರುವುದು ಕಟುವಾಸ್ತವ.
ಒಂದು ಕಡೆ ಸಾಮಾಜಿಕ ಅಸಮಾನತೆ, ಇನ್ನೊಂದು ಕಡೆ ಆರ್ಥಿಕ ಅಸಮಾನತೆ. ಇವೆರಡೂ ರಾಜಕೀಯ ಅಧಿಕಾರದ ಅಸ್ತ್ರವು ಕೆಲವರಲ್ಲಷ್ಟೇ ಕೇಂದ್ರೀಕೃತವಾಗುವಂತೆ ಮಾಡಿವೆ. ಇದು ಹೀಗೇ ಮುಂದುವರಿದರೆ ಸಾಮಾನ್ಯ ಜನರ ಸ್ಥಿತಿ ಕರುಣಾಜನಕ ಆಗುವುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ, ಅಧಿಕಾರವನ್ನು ಅಸಮಾನತೆ ನಿವಾರಣೆಗಾಗಿ ಬಳಸಬೇಕಾದ ಜರೂರತ್ತು ಎಂದಿಗಿಂತ ಇಂದು ಇದೆ.
–ಬಿ.ಆರ್.ಅಣ್ಣಾಸಾಗರ,ಸೇಡಂ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.