ಸ್ಮಶಾನದ ಭೂಮಿ ಕೊರತೆ ಇರುವ ಗ್ರಾಮ ಮತ್ತು ನಗರಗಳಲ್ಲಿ ಅಗತ್ಯ ಪ್ರಮಾಣದ ಭೂಮಿ ಕಾಯ್ದಿರಿಸಲು ಕಂದಾಯ ಇಲಾಖೆಯು ಜಿಲ್ಲಾಧಿಕಾರಿಗಳಿಗೆ ಆದೇಶಿಸಿರುವುದು ಪ್ರಶಂಸನೀಯ. ಸ್ಮಶಾನ ಇಲ್ಲದ ಕಾರಣ, ಎಷ್ಟೋ ಹಳ್ಳಿಗಳಲ್ಲಿ ಮೃತಪಟ್ಟ ತಮ್ಮ ಬಂಧು ಬಾಂಧವರನ್ನು ಜನ ಈಗಲೂ ತಮ್ಮ ಜಮೀನಿನಲ್ಲೊ, ರಸ್ತೆ ಬದಿಯಲ್ಲೊ ಮಣ್ಣು ಮಾಡುತ್ತಿದ್ದಾರೆ. ಇದ್ದಾಗ ಪ್ರೀತಿಯಿಂದ ನೋಡಿಕೊಂಡವರನ್ನು ಮಡಿದಾಗ ಎಲ್ಲೋ ಮಣ್ಣು ಮಾಡಿ ಬಂದೆವಲ್ಲಾ ಎನ್ನುವ ಕೊರಗು ಅವರನ್ನು ಕಾಡುತ್ತಿರುತ್ತದೆ. ಸ್ಮಶಾನದ ವಿಷಯ ಕೇವಲ ಕಾಗದದ ಲಿಪಿಯಾಗದೆ ಕಡ್ಡಾಯವಾಗಿ ಜಾರಿಗೆ ಬರಲಿ.
ರಾಜು ಬಿ. ಲಕ್ಕಂಪುರ, ಜಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.